i
ಕಾಡುಗೊಲ್ಲರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕ…
ಚಂದ್ರವಳ್ಳಿ ನ್ಯೂಸ್, ಮಂಡ್ಯ/ಮಳವಳ್ಳಿ:
ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊಸಪುರ ಗೊಲ್ಲರ ದೊಡ್ಡಿಯಲ್ಲಿ ನೂತನ ತಾಲೂಕು ಘಟಕ, ಅಧ್ಯಕ್ಷರು ಹಾಗು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಮಳವಳ್ಳಿ ತಾಲೂಕಿನ ಸರಳ ಸೌಮ್ಯ ಸ್ವಭಾವದ ಜನಪ್ರಿಯ ಶಾಸಕ ಡಾ.ಕೆ ಅನ್ನದಾನಿ ಅವರು ಉದ್ಘಾಟಿಸಿ ಮಾತನಾಡಿ. ಕಾಡುಗೊಲ್ಲರ ಎಸ್ಟಿ ಮೀಸಲಾತಿ ಹೋರಾಟಕ್ಕೆ ನಾನು ಕೂಡ ಸಂಪೂರ್ಣವಾಗಿ ಬೆಂಬಲ ನೀಡುತ್ತೇನೆ. ಮುಂದಿನ ಅಧಿವೇಶನದಲ್ಲಿ ಕಾಡುಗೊಲ್ಲರ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರಲ್ಲದೆ ಕಾಡುಗೊಲ್ಲ ಜನಾಂಗವನ್ನು ST ಸೇರಿಸುವ ವಿಷಯದ ಬಗ್ಗೆ ಜೆಡಿಎಸ್ ವರಿಷ್ಠರಾದ ಎಚ್ ಡಿ ಕುಮಾರಸ್ವಾಮಿ ಮತ್ತು ದೇವೇಗೌಡರೊಂದಿಗೆ ಚರ್ಚೆ ಮಾಡಿ ಈ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವು ಯಾದವ್ ಅಧ್ಯಕ್ಷತೆ ಮಾತನಾಡಿ ಕಾಡುಗೊಲ್ಲ ಸಮುದಾಯವನ್ನು ಈ ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬೆಕು ಈ ಸಮುದಾಯವನ್ನು ಅಲೆ ಅಲೆಮಾರಿಪಟ್ಟಿಗೆ ಸೇರಿಸಬೇಕು. ಹಾಗೂ ಗೊಲ್ಲರಹಟ್ಟಿಗಳನ್ನ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಬೇಕು ಗೊಲ್ಲರ ಹಟ್ಟಿಗಳಿಗೆ ಮೂಲಬೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಕೆಜೆ ಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಟಿ.ಹರ್ಷವರ್ಧನ್, ಕಾರ್ಯಾಧ್ಯಕ್ಷ ಹಾರೋಗೆರೆ ಮಹೇಶ್, ಕರ್ನಾಟಕ ಬುಡಕಟ್ಟು ಪರಿಷತ್ತು ರಾಜ್ಯಾಧ್ಯಕ್ಷ ಮಾಲತೇಶ್ ಅರಸು, ಮಂಡ್ಯ ಜಿಲ್ಲಾಧ್ಯಕ್ಷ ಜಿಟಿ ಉಮೇಶ್,
ರಾಮನಗರ ಜಿಲ್ಲಾಧ್ಯಕ್ಷ ಜಿಕೆ ರಮೇಶ್ ಮತ್ತಿತರರು ಸಭೆ ಉದ್ದೇಶಿಸಿ ಮಾತನಾಡಿದರು.
ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಯಾದವ್, ರಾಮನಗರ ಜಿಲ್ಲಾ ಸಂಚಾಲಕ ನಾಗರಾಜ್, ರಾಮನಗರ ಜಿಲ್ಲಾ ಉಪಾಧ್ಯಕ್ಷ ರಂಗಸ್ವಾಮಿ, ಕರಿಯಪ್ಪ ಅಲೆಮರದೊಡ್ಡಿ, ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ತಿಮ್ಮಯ್ಯ ಮ್ಯಾಕ್ಲೂರಹಳ್ಳಿ, ರಾಜ್ಯ ಸಂಚಾಲಕರಾದ ಕೆ ಶಂಕರ್ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿಎಂ ಈರಣ್ಣನವರುರಾಮನಗರ ತಾಲೂಕು ಅಧ್ಯಕ್ಷರಾದ ರಾಘವೇಂದ್ರ, ಮದ್ದೂರ್ ತಾಲೂಕ ಅಧ್ಯಕ್ಷರು, ಮಳವಳ್ಳಿ ತಾಲೂಕಿನ ನೂತನ ಅಧ್ಯಕ್ಷ ಚಿಕ್ಕ ರಂಗಯ್ಯ, ಪಾವಗಡ ತಾಲೂಕ ಅಧ್ಯಕ್ಷ ಚಿತ್ತರಾಜ ಜಂಗಮರಹಳ್ಳಿ, ಮದ್ದೂರು ತಾಲೂಕಿನ ಗೌರವಾಧ್ಯಕ್ಷ ರಾಮಣ್ಣ, ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಗಡಿ ತಾಲೂಕು ಕಾರ್ಯಾದ್ಯಕ್ಷ ಮುದ್ದಯ್ಯ, ಮಾಗಡಿ ತಾ ಪ್ರದಾನ ಕಾರ್ಯದರ್ಶಿ ಡಿ.ನಾಗೇಶ್, ಚಿತ್ರದುರ್ಗ ತಾಲೂಕು ಅಧ್ಯಕ್ಷ ಹರೀಶ್ ಪೂಜಾರ್, ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡ ಉಮೇಶ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾನಪದ ಕಲಾವಿದ ಮರಿ ಜುಂಜಯ್ಯ ಪ್ರಾರ್ಥಿಸಿದರು. ರಾಜ್ಯ ಸಂಚಾಲಕ ಕೆ ಶಂಕರ್ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಎಸ್ ತಿಮ್ಮಯ್ಯ ನಿರೂಪಿಸಿದರು.