i
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ, ವೃದ್ಧರಿಗೆ 5 ಸಾವಿರ, ವಿಕಲಚೇತನರಿಗೆ ಎರಡೂವರೆ ಸಾವಿರ ಪಿಂಚಣಿ-ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್. ಕೋಲಾರ:
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಲ್ಲಾ ಸ್ತ್ರೀಶಕ್ತಿ ಸಂಗಗಳ ಸಾಲಮನ್ನ, ವಯೋವೃದ್ಧರಿಗೆ 5 ಸಾವಿರ, ವಿಕಲಚೇತನ-ವಿಧವೆಯರಿಗೆ ಎರಡೂವರೆ ಸಾವಿರ ರೂ.ಗಳ ಪಿಂಚಣಿ ನೀಡಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ರಾಜ್ಯದ ಜನತೆ ಜಾತಿ, ಧರ್ಮ ಮೀರಿ ಒಮ್ಮೆ ಸಂಪೂರ್ಣ ಅಧಿಕಾರ ಕೊಟ್ಟು ನೋಡಿ, ಆರೋಗ್ಯ, ಶಿಕ್ಷಣ, ನೀರಾವರಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವೆ. ರಾಜ್ಯದ ಜನರ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ರಥಯಾತ್ರೆ ಆರಂಭಿಸಿದ್ದೇವೆ. ಬದಲಾವಣೆ ತರಲು ಪ್ರಾಮಾಣಕ ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ಪಕ್ಷ ಕನಿಷ್ಠ 123 ಸ್ಥಾನಗಳಲ್ಲಿ ಗೆದ್ದು ಕನಸಿನ ರಾಮ ರಾಜ್ಯ ಸ್ಥಾಪಿಸುತ್ತೇನೆ. ಶೈಕ್ಷಣಿಕ ಪ್ರಗತಿಯನ್ನು ರಾಜ್ಯದಲ್ಲಿ ಸಾಧಿಸೋ ಸಲುವಾಗಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಾಲೆಗಳನ್ನು ಸ್ಥಾಪನೆ ಮಾಡುವಂತ ಗುರಿಯನ್ನು ಹೊಂದಿದ್ದೇನೆ. ಸ್ತ್ರೀಶಕ್ತಿ ಸಂಘಗಳಿಗೆ ನೆರವಾಗೋ ನಿಟ್ಟಿನಲ್ಲಿ ನಮ್ಮ ಸರ್ಕಾರ ಬಂದರೇ 24 ಗಂಟೆಯಲ್ಲೇ ಸಾಲಮನ್ನಾ ಮಾಡಲಾಗುತ್ತದೆ ಎಂದು ಘೋಷಿಸಿದರು.