i
ಕೋಟೆ ನಾಡಿನ ನೇತ್ರ ಕಣ್ಮರೆ, ಪೊಲೀಸ್ ಠಾಣೆಗೆ ದೂರು ನೀಡಿದ ಪತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಜೋಗಿಮಟ್ಟಿ ರಸ್ತೆ ಮೈಲಮ್ಮ ದೇವಸ್ಥಾನ ಸಮೀಪದ ವಾಸಿ ವಿ.ನೇತ್ರ(30) ಕಳೆದ 27 ರಂದು ಬೆಳಿಗ್ಗೆ
ಸುಮಾರು 10-30 ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ. ನಮ್ಮ ಮನೆಯಿಂದ ಯಲ್ಲಮ್ಮದೇವಿಯ ಪಟ್ಲಿಗೆಯನ್ನು ತೆಗೆದುಕೊಂಡು
ಹೋದವರು ಇದುವೆರಗೂ ಮನೆಗೆ ಬಂದಿಲ್ಲ. ಉಚ್ಚಂಗಿ ಗುಡ್ಡಕ್ಕೆ ಹೋಗಿ ಅಲ್ಲಿಯೂ ಹುಡುಕಾಡಿದ್ದೇವೆ. 4.5 ಅಡಿ ಎತ್ತರ, ಕಪ್ಪುಬಣ್ಣ,
ಉದ್ದನೆ ಮುಖ ಹೊಂದಿರುವ ಇವರು ಎಲ್ಲಿಯಾದರೂ ಕಂಡು ಬಂದರೆ ನಮಗೆ ತಿಳಿಸಿ ವಿ.ನೇತ್ರಳ ಗಂಡ ರಾಜು ಜಿ. ಇವರು ನಗರ
ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊ: 9945351807.