i
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ಪಟ್ಟಣದಲ್ಲಿ ದಂಪತಿಗಳಿಬ್ಬರ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ.
ಪ್ರಭಾಕರ್ ಶೆಟ್ಟಿ(72), ವಿಜಯ ಲಕ್ಷ್ಮಿ( 65) ಕೊಲೆಯಾದ ದಂಪತಿವರು.
ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯ ನಿವಾಸದಲ್ಲಿ ಘಟನೆ ಜರುಗಿದೆ.
ಹೋಲ್ ಸೆಲ್ ಉಪ್ಪಿನ ವ್ಯಾಪಾರ ಮಾಡುತ್ತಿದ್ದ ದಂಪತಿಗಳಾಗಿದ್ದು ಹಾಡ ಹಗಲೇ ಮನೆಗೆ ನುಗ್ಗಿ ಕೊಲೆ ಮಾಡಿ ದುಷ್ಕರ್ಮಿಗಳು ಹೋಗಿದ್ದು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.