i
ಹಿರಿಯೂರು ಸುಧಾಕರ್-ಸೋಮಶೇಖರ್ ಲಕಲಕಲಕ… ಇಬ್ಬರು ರಾಜೀ ಆದ್ರಾ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳೊಂದಿಗೆ ಎಐಸಿಸಿ ಕಾರ್ಯದರ್ಶಿ ಉಸ್ತುವಾರಿ ಮಯೂರ್ ಜಯಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ರವರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಮುಂಬರುವ ವಿಧಾನಸಭಾ ಚುನಾವಣೆಯ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂದರ್ಶನದಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಮತ್ತು ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಇಬ್ಬರು ಶುಕ್ರವಾರ ತಡ ರಾತ್ರಿ ರಾಜೀ ಸಂಧಾನ ನಡೆದು ಕೈಕೈ ಕುಲಕಿ ನಗು ಬೀರಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇಬ್ಬರೂ ಸಾಕ್ಷಿಯಾಗಿದ್ದಾರೆ.
ಕಳೆದ ವಾರ ಧರ್ಮಪುರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸೋಮಶೇಖರ್ ಮೇಲೆ ಮಾಜಿ ಸಚಿವ ಸುಧಾಕರ್ ಬಣದ ಮುಖಂಡರು ತೀವ್ರ ಹಲ್ಲೆ ಮಾಡಿದ್ದರು. ಪರಸ್ಪರರು ಜಾತಿ ನಿಂಧನೆ ಪ್ರಕರಣಗಳನ್ನು ದಾಖಲಿಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಸೋಮಶೇಖರ್ ಅವರ ಸೋಲಿಗೆ ಸುಧಾಕರ್ ಅವರೇ ಕಾರಣ ಎಂದು ತಿಳಿದು ಇಬ್ಬರು ಹಾವು-ಮೊಂಗಸಿ ತರ ಕಿತ್ತಾಟ ಮಾಡಿಕೊಂಡಿದ್ದರು. ಆದರೆ ಏಕಾಏಕಿ ಇಬ್ಬರು ಎದುರಾದಾಗ ಕೈಕೈ ಕುಲಕಿದ್ದಾರೆ. ಕಿರು ನಗೆ ಬೀರಿದ್ದಾರೆ. ಮತ್ತೆ ಯಾವಾಗ ಸಿಗೋಣ ಎಂದು ತಮಷ್ಟಕ್ಕೇ ತಾವು ಪ್ರಶ್ನೆ ಮಾಡಿಕೊಂಡಿದ್ದಾರೆ. ಈ ಭೇಟಿ ಕುರಿತು ಚಂದ್ರವಳ್ಳಿ ಪತ್ರಿಕೆ ಸುಧಾಕರ್ ಸಂಪರ್ಕಿಸಿದಾಗ ಅವರು ಪೋನ್ ರಿಸೀವ್ ಮಾಡಲಿಲ್ಲ. ಹಾಗಾಗಿ ಇಬ್ಬರು 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ತೋಳೆರಿಸುವ ಸಾಧ್ಯತೆ ಇರುವುದನ್ನ ತಳ್ಳಿ ಹಾಕುವಂತಿಲ್ಲ.