i
ಕಾಂಗ್ರೆಸ್ ಹಿರಿಯ ಮುಖಂಡ ಸ.ರಂಗಯ್ಯ ಇನ್ನಿಲ್ಲ, ಗಣ್ಯರ ಸಂತಾಪ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಜಿಪಂ ಆನೆಸಿದ್ರಿ ಸ.ರಂಗಯ್ಯ(80) ವಿಧಿವಶರಾಗಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್ ಸೇರಿದಂತೆ ಮೃತರಿಗೆ 4 ಮಂದಿ ಪುತ್ರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಬುಧವಾರ ಮಧ್ಯಾಹ್ನ 1.30ಕ್ಕೆ ಜವನಗೊಂಡನಹಳ್ಳಿ ಸಮೀಪದ ಆನೆಸಿದ್ರಿಯ ತೋಟದಲ್ಲಿ ಅಂತ್ಯ ಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತ ಸ.ರಂಗಯ್ಯ ಸಜ್ಜನ ರಾಜಕಾರಣಿಯಾಗಿದ್ದರಲ್ಲದೆ ಕೆ.ಎಚ್.ರಂಗನಾಥ್ ಅವರ ಆತ್ಮೀಯ ಒಡನಾಡಿಗಳಾಗಿದ್ದರು. ಕಾಡು ಗೊಲ್ಲ ಸಮಾಜದ ಮುಖಂಡರಾಗಿ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದರು. ಹಾರನಕಣಿವೆ ರಂಗನಾಥಸ್ವಾಮಿ ಟ್ರಸ್ಟ್ ಅಧ್ಯಕ್ಷರಾಗಿ ಉತ್ತಮ ಸೇವೆ ಮಾಡಿದ್ದ ಮೃತ ಸ.ರಂಗಯ್ಯನವರ ನಿಧನಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮಾಜಿ ಜಿಪಂ ಸದಸ್ಯ ಪಿಲಾಜನಹಳ್ಳಿ ಎಂ.ಜಯಣ್ಣ, ಜೆಡಿಎಸ್ ಮುಖಂಡ ಛಲವಾದಿ ನಾಗರಾಜ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.