i
ನಿಯಮ ಉಲ್ಲಂಘಿಸಿರುವ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟಗಳ ಸ್ಪರ್ಧೆಯಲ್ಲಿ ನಿಯಮ ಉಲ್ಲಂಘಿಸಿರುವ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುತ್ತಿರುವ ಕ್ರೀಡೆಗಳನ್ನು ಮೂರು ಹಂತಗಳಲ್ಲಿ ಕ್ರಮವಾಗಿ ಆಡಿಸಬೇಕಿತ್ತು. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಿಂದ ಆಗಮಿಸಿದ್ದ ಕೆಲವೇ ಕೆಲವು ಕ್ರೀಡಾಪಟುಗಳಿಗೆ ಮಾತ್ರ ಕ್ರೀಡೆಗಳನ್ನು ಆಯೋಜಿಸಿರುವುದು ಗೊತ್ತಾಗಿ ಸ್ಪರ್ಧಾಳುಗಳನ್ನು ವಿಚಾರಿಸಿದಾಗ ಸ್ಥಳೀಯ ಹಂತಗಳಲ್ಲಿ ಸ್ಪರ್ಧೆಗಳು ನಡೆಯಲಿಲ್ಲ. ನಾವುಗಳು ಭಾಗವಹಿಸಿ ಆಯ್ಕೆಗೊಳ್ಳದಿದ್ದರೂ ಕ್ರೀಡಾ ಕ್ಲಬ್ಗಳಲ್ಲಿ ಪ್ರಾಕ್ಟಿಸ್ ನಡೆಸುತ್ತಿರುವ ನಮಗೆ ವಾಟ್ಸ್ಪ್ ಸಂದೇಶಗಳ ಮೂಲಕ ಆಹ್ವಾನಿಸಿರುವುದಾಗಿ ಸ್ಪರ್ಧಾಳುಗಳು ದೂರಿದ್ದಾರೆಂದು ಅಂಬೇಡ್ಕರ್ ಸೇನೆಯವರು ಜಿಲ್ಲಾಡಳಿತದ ಗಮನಕ್ಕೆ ತಂದರು.
ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಎ,ತಾಳಿಕೆರೆ, ಗೌರವಾಧ್ಯಕ್ಷ ಹೊಳೆಯಪ್ಪ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಪಿ, ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಾಜ ಟಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ, ಕಾರ್ಮಿಕ ಘಟಕದ ಅಧ್ಯಕ್ಷ ಹಾಲೇಶ್, ಚಂದ್ರಪ್ಪಘಾಟ್ ಈ ಸಂದರ್ಭದಲ್ಲಿದ್ದರು.