i
ವಿ.ವಿ.ಸಾಗರದಿಂದ 593 ಕೋಟಿರೂ.ಗಳಲ್ಲಿ 183 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ-ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ 183 ಹಳ್ಳಿಗಳಿಗೆ 593 ಕೋಟಿ ವೆಚ್ಚದಲ್ಲಿ ವಿ.ವಿ.ಸಾಗರದಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಗೋನೂರು, ಲಕ್ಷ್ಮಿಸಾಗರ, ಹುಲ್ಲೂರು, ಜಾನಕೊಂಡ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡಿ ಮಾತನಾಡಿದರು.
ನೀರು ಮತ್ತು ಮನೆಗಳನ್ನು ತಂದು ಎಲ್ಲಾ ಸಮಾಜಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ ಮನೆಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ದೊಡ್ಡ ದೊಡ್ಡ ಟ್ಯಾಂಕ್ ಕಟ್ಟುವ ಮೂಲಕ ಪ್ರತಿ ಹಳ್ಳಿಯ ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಗ್ರಾಮಸಭೆಯಲ್ಲಿ ಬಲಿಷ್ಠರು ಮನೆ ಬರೆದುಕೊಂಡು ಬಡವರಿಗೆ ಅನ್ಯಾಯವಾಗಬಾರದು ಎಂದು ಖುದ್ದು ನಾನೇ ಬಂದು ಮನೆಗಳನ್ನು ಹಂಚಿಕೆ ಮಾಡುತ್ತಿದ್ದೇನೆ, ಪಿಡಿಓ ಗಳ ಬಳಿ ಸಮಯ ತೆಗೆದುಕೊಂಡು ಮನೆಯನ್ನು ಬರೆಸಿಕೊಳ್ಳಿ ಒಂದು ವೇಳೆ ಮನೆ ಕಡಿಮೆ ಬಂದರೆ ಬದಲಿ ವ್ಯವಸ್ಥೆ ಮಾಡಿ ಇತರೆ ಪಂಚಾಯಿತಿಯಲ್ಲಿ ಉಳಿಕೆ ಮನೆಯನ್ನು ವರ್ಗಾಹಿಸುತ್ತೇನೆ ಎಂದು ತಿಳಿಸಿದರು.
ಸೋಮವಾರ ನಡೆದು ಗ್ರಾಮಸಭೆಯಲ್ಲಿ ಗೋನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ- 50 , ಪರಿಶಿಷ್ಟ ಪಂಗಡ-85 ಮನೆ, ಲಕ್ಷ್ಮಿಸಾಗರ ಗ್ರಾಮ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ-60 , ಪರಿಶಿಷ್ಟ ಪಂಗಡ-40, ಸಾಮಾನ್ಯ –40 , ಹುಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ-70, ಪರಿಶಿಷ್ಟ ಪಂಗಡ-20 , ಸಾಮಾನ್ಯ-60, ಜಾನಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ- 50 , ಪರಿಶಿಷ್ಟ ಪಂಗಡ-40 , ಸಾಮಾನ್ಯ-20 ಮನೆಗಳನ್ನು ನೀಡಲಾಗಿದೆ ಎಂದರು.
3.60 ಕೋಟಿ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ತಾಲೂಕಿನ ಗೊಲ್ಲನಕಟ್ಟೆ ಗ್ರಾಮಕ್ಕೆ 40 ಲಕ್ಷ, ಲಕ್ಷ್ಮಿಸಾಗರ ಗ್ರಾಮದ 8 ರಸ್ತೆಗಳಿಗೆ 70 ಲಕ್ಷ, ಜಾನಕೊಂಡ ಗ್ರಾಮದ ರಸ್ತೆಗೆ –70 ಲಕ್ಷ, ಹುಲ್ಲೂರು ಗ್ರಾಮದ ರಸ್ತೆಗೆ 1 ಕೋಟಿ, ಗೋನೂರು ಗ್ರಾಮದ ಎರಡು ರಸ್ತೆಗೆ 80ಲಕ್ಷ ಸೇರಿ ಎಲ್ಲಾ ರಸ್ತೆ ಕಾಮಗಾರಿಗೆ ಇಂದು ಪೂಜೆ ಮಾಡಿದ್ದು ಒಂದೆರೆಡು ತಿಂಗಳಲ್ಲಿ ಪೂರ್ಣವಾಗಲಿವೆ. ಇದರ ಜೊತೆಗೆ ಲಕ್ಷ್ಮಿಸಾಗರ ಕೆರೆ ಅಭಿವೃದ್ಧಿಗೆ 2.50 ಕೋಟಿ ನೀಡಲಾಗಿದ್ದು ಕೆರೆಯ ಸಂಪೂರ್ಣ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಟಿ.ಗೀತಾ, ಲಕ್ಷ್ಮಿಸಾಗರ ಗ್ರಾ.ಪಂ.ಅಧ್ಯಕ್ಷೆ ಆರ್.ಸಾವಿತ್ರಮ್ಮ, ಜಾನಕೊಂಡ ಗ್ರಾ.ಪಂ.ಅಧ್ಯಕ್ಷೆ ಚಿಂತಾಮಣಿ, ಹುಲ್ಲೂರು ಗ್ರಾ.ಪಂ.ಅಧ್ಯಕ್ಷ ಚಂದ್ರಮ್ಮಅಧ್ಯಕ್ಷೆ ಪಂಚಾಯತಿ ಸದಸ್ಯ ಪಂಚಾಯತ ಎ.ಡಿ.ಧನಂಜಯ್, ವಸತಿ ಯೋಜನೆ ಲೋಕೇಶ್ ಮತ್ತು ಪಿಡಿಓ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಇದ್ದರು.