i
ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಗೆ 50 ಸಾವಿರ ದಂಡ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರಿಗೆ ಹೈಕೋರ್ಟ ದಂಡ ವಿದಿಸಿ ಆದೇಶಿಸಿದೆ.
ಸರ್ಕಾರಿ ನೌಕರರಿಗೆ ಸರಿಸಮನಾಗಿ ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರಿಗೆ ವೇತನ ನೀಡುವಂತೆ ಕುರಿತು ಮನವಿ ನೀಡಿದ್ದರು.
ಆದರೆ ನೌಕರರ ಮನವಿ ಪರಿಗಣಿಸಲು ಎರಡು ವರ್ಷ ವಿಳಂಬ ಮಾಡಿದ ಕುರಿತು ಪ್ರಕರಣದಲ್ಲಿ ಉನ್ನತ ಶೀಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಮಹೇಶ್ ಅವರಿಗೆ ಬೆಂಗಳೂರು ಹೈ ಕೋರ್ಟ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಸರ್ಕಾರಿ ನೌಕರರಿಗೆ ಸಮನಾಗಿ ನಮಗೂ ಸಂಬಳ ನೀಡಬೇಕು ಅದೇ ರೀತಿ ಸೌಲಭ್ಯ ವಿತರಿಸಬೇಕು ಎಂದು ದಂಯಾನಂದ ಸಾಗರ್ ಶೀಕ್ಷಣ ಸಂಸ್ಥೆಗಳ ಖಾಯಂ ನೌಕಕರು 2019ರಲ್ಲಿ ಹೈ ಕೋರ್ಟಗೆ ಅರ್ಜಿ ಸಲಿಸಿ ಮನವಿ ಮಾಡಿಕೊಂಡಿದ್ದರು.
ಉನ್ನತ ಶಿಕ್ಷಣ ಇಲಾಖೆ ಮರು ಪರಿಶೀಲನ ಪ್ರಾಧಿಕಾರವು ನೌಕರರ ಮನವಿಯನ್ನು ಪುನರ್ ವಿಮರ್ಶೆ ಮಾಡಿ 4 ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು 2020ರಲ್ಲಿ ಹೈಕೋರ್ಟ ಏಕಸದಸ್ಯ ಪೀಠ ಆದೇಶಸಿತ್ತು.