i
ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಪರಿಹಾರ ಬಿಡುಗಡೆ…
ಚಂದ್ರವಳ್ಳಿ ನ್ಯೂಸ್, ಧಾರವಾಡ:
ಧಾರವಾಡ ಜಿಲ್ಲೆಯಲ್ಲಿ 2022 ನೇ ಸಾಲಿನ ಬಿದ್ದ ಅತಿಯಾದ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಬೆಳೆಹಾನಿಯಾಗಿತ್ತು. ರಾಜ್ಯಸರ್ಕಾರವು ಇಲ್ಲಿಯವರೆಗೆ ಸುಮಾರು 8 ಹಂತಗಳಲ್ಲಿ ಜಿಲ್ಲೆಯ 1,25,541 ರೈತ ಫಲಾನುಭವಿಗಳಿಗೆ ರೂ. 208,31,46,904 ಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೆ.7,2022 ರಂದು 2049 ಫಲಾನುಭವಿಗಳಿಗೆ 3,91,23,332 ಮತ್ತು ಸೆ.15,2022 ರಂದು 18538 ಫಲಾನುಭವಿಗಳಿಗೆ 34,53,04,149 ಮತ್ತು ಸೆ.22, 2022 ರಂದು 15608 ಫಲಾನುಭವಿಗಳಿಗೆ 27,27,00,000 ಹಾಗೂ ಅ.12, 2022 ರಂದು 29987 ಫಲಾನುಭವಿಗಳಿಗೆ 50,59,34,072 ಮತ್ತು ಅ.14, 2022 ರಂದು 30787 ಫಲಾನುಭವಿಗಳಿಗೆ 50,23,03,548 ಮತ್ತು ಅ.29, 2022 ರಂದು 13108 ಫಲಾನುಭವಿಗಳಿಗೆ 20,83,62,472 ಹಾಗೂ ನ.10,2022 ರಂದು 8626 ಫಲಾನುಭವಿಗಳಿಗೆ 12,34,88,422 ಮತ್ತು ಜ.6, 2023 ರಂದು 5806 ಫಲಾನುಭವಿಗಳಿಗೆ 8,59,30,909 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.ಇನ್ನುಳಿದ ಅರ್ಹ ರೈತ ಫಲಾನುಭವಿಗಳಿಗೆ ಬೆಳೆಹಾನಿ ಪರಿಹಾರವನ್ನು ಹಂತಹಂತವಾಗಿ ವಿತರಿಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.