i
ವಿವಾಹಿತ ಮಹಿಳಾ ಶಿಕ್ಷಕಿಯರ ನೇಮಕಾತಿ ವಿವಾದ ಬಗೆಹರಿಸಲು ಆಗ್ರಹ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿವಾಹಿತ ಮಹಿಳಾ ಶಿಕ್ಷಕಿಯರ ನೇಮಕಾತಿ ವಿವಾದ ಬಗೆಹರಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ 15ನೇ ರ್ಯಾಂಕ್ ಪಡೆದ ಅಭ್ಯರ್ಥಿಶಿಕ್ಷಕಿ ಹೇಮಲತ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿಕ್ಷಕರಾಗಿ ನೇಮಕವಾಗಲು ಕನಸು ಹೊತ್ತವರಿಗೆ ಎರಡು ತಿಂಗಳಿಂದಲೂ ವಿವಾಹಿತ ಮಹಿಳಾ ಅಭ್ಯರ್ಥಿಗಳ ವಿವಾದವನ್ನು ಬಗೆಹರಿಸದೆ ಪ್ರತಿ ಬಾರಿಯು ಕೋರ್ಟ್ ತನ್ನ ಕಲಾಪವನ್ನು ಮುಂದೂಡಲಾಗುತ್ತಿದ್ದು 13,000 ಶಿಕ್ಷಕ ಆಕಾಂಕ್ಷಿಗಳಿಗೆ ಭಾರಿ ನಿರಾಸೆಯಾಗುತಲಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಡಿಸೆಂಬರ್ ವೇಳೆಗೆ ಶಿಕ್ಷಕರು ಶಾಲೆಯಲ್ಲಿರುತ್ತಾರೆ ಎಂಬ ಹೇಳಿಕೆಗಳು ಅಲ್ಲದೆ ಫೆಬ್ರವರಿಯಲ್ಲಿ ಶಿಕ್ಷಕರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಗುತ್ತದೆ ಎಂಬ ಹೇಳಿಕೆಗಳು ಭಾರಿ ನಿರಾಸೆಯ ಮೂಟೆಯನ್ನು ಹೊರಿಸುತ್ತಲಿವೆ. ಅಲ್ಲದೆ 1:1 ಅಲ್ಲಿ ಆಯ್ಕೆಯಾದ ವಿವಾಹವಾಗಿಲ್ಲದ ಮಹಿಳಾ ಅಭ್ಯರ್ಥಿಗಳು ಈ ಸಂದರ್ಭದಲ್ಲಿ ಮದುವೆಯಾದ ಪಕ್ಷದಲ್ಲಿ ಮತ್ತೆ ಗಂಡನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಕಾರಣಕ್ಕಾಗಿ ಹಲವಾರು ಮಹಿಳಾ ಅಭ್ಯರ್ಥಿಗಳು ತಮ್ಮ ಮದುವೆ ಮುಂದೂಡುತ್ತಿದ್ದಾರೆ. ಹಲವರ ಯೋಜನೆಗಳು ತಲೆಕೆಳಗಾಗಿವೆ. ಒಂದು ಸರ್ಕಾರಿ ಕೆಲಸ ಒಂದು ಮನೆಯ ದೀಪವಿದ್ದಂತೆ. ಸರ್ಕಾರ ಆದಷ್ಟು ಬೇಗ ಆ ದೀಪವನ್ನು ಹಚ್ಚಲಿ ಎಂದು ಈ ಮೂಲಕ ಸಂಬಂಧ ಪಟ್ಟವರಲ್ಲಿ ಅವರು ಪ್ರಾರ್ಥಿಸಿದ್ದಾರೆ.