i
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಪಂಚರತ್ನ ರಥಯಾತ್ರೆ ನನ್ನ ಬದುಕಿನ ಧನ್ಯತೆ, ಸಾರ್ಥಕತೆಗೆ ಸಾಕ್ಷಿ. ಅದರಲ್ಲೂ ದೇವದುರ್ಗ ಕ್ಷೇತ್ರದ ಗಾಣಧಾಳ ಗ್ರಾಮ ಆಜನ್ಮ ಪರ್ಯಂತ ನನ್ನ ಹೃದಯದಲ್ಲಿ ನೆಲೆಯೂರಲಿದೆ. ಬದುಕಿದ್ದಾಗಲೇ ಒಬ್ಬರನ್ನು ದೇವರೆಂದು ಆರಾಧಿಸುವ ಅಲ್ಲಿನ ಜನರ ಪ್ರೀತಿ ಕಂಡು ನಿಜಕ್ಕೂ ಮೂಕನಾದೆ ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ವಿಟ್ ಮಾಡಿ ಹೇಳಿದ್ದಾರೆ.
ಹನಿ ನೀರು ಕಾಣದೆ, ಬರಡು ನೆಲವಾಗಿತ್ತು ಈ ಭಾಗ. ಹಿಡಿ ಅನ್ನಕಾಗಿ ಅನ್ಯರಾಜ್ಯಗಳಿಗೆ ಗುಳೆ ಹೋಗುತ್ತಿದ್ದ ಜನರಿಗೆ ಭಗೀರಥರಾಗಿ ಅವತರಿಸಿ ಬಂದವರೇ ಎಚ್.ಡಿ.ದೇವೇಗೌಡ ಅವರು. ಮಾಜಿ ಪ್ರಧಾನಿಗಳಿಗೆ ಈ ಜನರು ಹೃದಯದಲ್ಲಿ ಗುಡಿ ಕಟ್ಟಿ ಆರಾಧಿಸುತ್ತಿದ್ದಾರೆ ಎಂದು ಭಾವುಕರಾಗಿ ತಿಳಿಸಿದ್ದಾರೆ.