i
ಚಿಕ್ಕಮಗಳೂರು ಕ್ಷೇತ್ರಕ್ಕೆ ಸಿಟಿ ರವಿಗೆ ಜೆಡಿಎಸ್ ಟಿಕೆಟ್…
ಚಂದ್ರವಳ್ಳಿ ನ್ಯೂಸ್, ಬೀದರ್:
ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರಕ್ಕೆ ಬಿಜೆಪಿ ಟೆಕೆಟ್ ನೀಡುವುದಾಗಿ ಬಿಜೆಪಿ ಮುಖಂಡ ಸಿ.ಟಿ.ರವಿ ನೀಡಿದ ಹೇಳಿಕೆ ಬೆನ್ನಲ್ಲೇ ಬೀದರ್ನಲ್ಲಿ ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪೂರ್ ಹೇಳಿಕೆ ನೀಡಿ ಬಿಜೆಪಿ ಮುಖಂಡ ಸಿ.ಟಿ.ರವಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಜೆಡಿಎಸ್ ಪಕ್ಷದಿಂದ ನಿಂತುಕೊಳ್ಳಲಿ ಬೇಕಿದ್ದರೇ ಚಿಕ್ಕಮಗಳೂರಿನಿಂದಲೇ ಅವರಿಗೆ ಜೆಡಿಎಸ್ ಟಿಕೆಟ್ ನೀಡುತ್ತೇವೆ ಎಂದು ಸಿ.ಟಿ.ರವಿಗೆ ತಿರುಗೇಟು ಬಂಡೆಪ್ಪ ಖಾಶೆಂಪೂರ್ ತಿರುಗೇಟು ನೀಡಿ ವಾಗ್ದಾಳಿ ಮಾಡಿದ್ದಾರೆ.
ಸಿಟಿ ರವಿ ಒಂದು ಪಕ್ಷದ ರಾಷ್ಟ್ರ ಪ್ರಧಾನ ಕಾರ್ಯದರ್ಶಿಯಾಗಿ ಲಘುವಾಗಿ ಮಾತಾಡಬಾರದು. ದೇವೇಗೌಡರ ಕುಟುಂಬದವರು ಬೇರೆ ಪಾರ್ಟಿಗೆ ಹೋಗಲು ಸಾಧ್ಯನೇ ಇಲ್ಲ. ದೇವೇಗೌಡರ ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಬಂದರೇ ಒಂದು ಕಡೆ ಕುಳಿತುಕೊಂಡು ಅವರೇ ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಹೊರಗಡೆ ಬರುತ್ತಾರೆ. ಸಿ.ಟಿ.ರವಿ ಹಿಟ್ ಅಂಡ್ ರನ್ ತರ ಹೋಗೋದು ಬೇಡ. ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲೆಲ್ಲಿ ಅನಿವಾರ್ಯ ಇದೆ ಅಲ್ಲಿ ಕುಟುಂಬದವರಿಗೆ ನಿಲ್ಲಿಸುತ್ತೇವೆಂದು, ನಮ್ಮ ಪಾರ್ಟಿಯಲ್ಲಿ ಯಾವುದೇ ರೀತಿ ಸಮಸ್ಯೆ ಇಲ್ಲ, ಒಂದು ವೇಳೆ ಎಲ್ಲಿಯಾದರೂ ಸಮಸ್ಯೆ ಇದ್ದರೆ ನಾವು ಒಂದು ಕಡೆ ಕುಳಿತುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ, ಮೊದಲು ಬಿಜೆಪಿ ಪಕ್ಷದ ಬಗ್ಗೆ ಸಿಟಿ ರವಿ ಯೋಚಿಸಲಿ ಎಂದು ಹೇಳಿದರು.