i
ಭ್ರಷ್ಟ ಬಿಜೆಪಿ ಸೋಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ-ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭ್ರಷ್ಟ ಬಿಜೆಪಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆ ಕಾರ್ಯಕರ್ತರು ಮುಖಂಡರ ಮೇಲಿದೆ ಎಂದು ಕೆಪಿಸಿಸಿ ಅಸಂಘಟಿತ ರಾಜ್ಯಾಧ್ಯಕ್ಷ ಜಿಎಸ್ ಮಂಜುನಾಥ್ ಹೇಳಿದರು.
ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು ಭೇಟಿ ನೀಡಿ ಸಮಾಜದ ಮುಖಂಡರುಗಳನ್ನು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಜೊತೆ ಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.
ಮಾಜಿ ಸಚಿವ ಸುಧಾಕರ್ ಗೆಲುವಿಗೆ ಈಗಿನಿಂದಲೇ ಎಲ್ಲರೂ ಕೆಲಸ ಮಾಡಿ ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಅಧ್ಯಕ್ಷ ಜಿ.ಎಲ್.ಮೂರ್ತಿ, ಶ್ರಾವಣಗೆರೆ ಗೌಡಪ್ಪ, ಕೃಷ್ಣಾಪುರ ಕೃಷ್ಣ, ಬೋರನ ಕುಂಟೆ ಜೀವೇಶ್, ಶಂಕರ್, ಗಜ, ಗಾಂಧಿನಗರ ಮಾಂತೇಶ್ ಗಾಟ್, ಮಂಜು, ಹರ್ತಿಕೋಟೆ ಬಾಬು, ಕೆಆರ್ ಹಳ್ಳಿ ಗಿರಿ, ಸಕ್ಕರ ಭೂತೇಶ್, ನಂದಿಹಳ್ಳಿ ಗಿರಿ, ನಾಗರಾಜ್, ವಕೀಲರು ಅಂಜನಪ್ಪ, ಗೌಡನಹಳ್ಳಿ ಲಿಂಗರಾಜ್, ಸೂರಗೊಂಡನಹಳ್ಳಿ ಗ್ರಾಮಸ್ಥರು ಸೇರಿದಂತೆ ಇನ್ನೂ ಮುಂತಾದವರು ಭಾಗವಹಿಸಿದ್ದರು.