i
ಮುರುಘಾ ಮಠದ ವಿಶೇಷಾಧಿಕಾರಿ ರೇವತಿ ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ತುಮಕೂರು/ಚಿತ್ರದುರ್ಗ:
ಮುರುಘಾ ಶರಣರ ಪರಾಮಾಪ್ತೆ, ಮುರುಘಾ ಮಠದ ವಿಶೇಷಾಧಿಕಾರಿ ರೇವತಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಪಡುವಲ ಮಠದಿಂದ ನಾಪತ್ತೆ ಆಗಿದ್ದಾಳೆ ಎನ್ನಲಾಗುತ್ತಿದೆ.
ಪಡುವಲ ಮಠದಲ್ಲಿ ಅಕ್ಕ ಮತ್ತು ತನ್ನ ತಾಯಿಯೊಂದಿಗೆ ನೆಲೆಸಿದ್ದ ರೇವತಿ, ಇದೀಗ ದಿಢೀರನೇ ಜಾಗ ಖಾಲಿ ಮಾಡಿ ನಾಪತ್ತೆ ಆಗಿದ್ದಾಳೆ. ಪಡುವಲ ಮಠದ ಜಾಗವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಸುಮಾರು 10-12 ವರ್ಷಗಳಿಂದ ರೇವತಿ ಅಲ್ಲಿಯೇ ವಾಸವಾಗಿದ್ದಳು. ಸದ್ಯ ರೇವತಿ ನಾಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಜಿ. ಹೊಸಳ್ಳಿಯಲ್ಲಿ ಶ್ರೀ ಜಡೆರುದ್ರ ಸ್ವಾಮಿ ಗದ್ದುಗೆ ಮಠವಿದ್ದು ಮಠಕ್ಕೆ ಸೇರಿದ 18 ಎಕರೆ ಜಾಗವಿದೆ. ಈ ಜಾಗವನ್ನು ಗ್ರಾಮಸ್ಥರು ಮರುಘಾ ಮಠಕ್ಕೆ ಹಸ್ತಾಂತರ ಮಾಡಿದ್ದರು. ಮರುಘಾ ಮಠಕ್ಕೆ ಹಸ್ತಾಂತರವಾದ ಬಳಿಕ ಮಠದ ಪರವಾಗಿ ಇಲ್ಲಿ ರೇವತಿ ವಾಸವಾಗಿದ್ದಳು ಅಲ್ಲದೆ ಸಾಕಷ್ಟು ಹಸುಗಳನ್ನು ಸಾಕುತ್ತಿದ್ದಳು ಎನ್ನಲಾಗಿದೆ.