
ಅರ್ಜುನ್ ಸರ್ಜಾ ನಿರ್ಮಿಸಿದ ಹನುಮಾನ್ ದೇವಸ್ಥಾನಕ್ಕೆ ಸಖತ್ ಬೇಡಿಕೆ…
ಚಂದ್ರವಳ್ಳಿ ನ್ಯೂಸ್, ತಮಿಳುನಾಡು:
ಖ್ಯಾತ ದಕ್ಷಿಣ ಭಾರತದ ಸಿನಿಮಾ ನಾಯಕ ನಟ, ಕನ್ನಡಿಗ ಅರ್ಜುನ್ ಸರ್ಜಾ ನಿರ್ಮಿಸಿರುವ ಹನುಮಾನ್ ದೇವಸ್ಥಾನಕ್ಕೆ ಸಖತ್ ಬೇಡಿಕೆ ಇದ್ದು ಹಲವು ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸುತ್ತಿದ್ದಾರೆ.
ಟಿಆರ್ ಎಸ್ ಎಂಎಲ್ ಸಿ ಕಲ್ವಕುಂಟ್ಲ ಕವಿತಾ ತಮಿಳುನಾಡಿನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಲು ಚೆನ್ನೈಗೆ ತೆರಳಿದ್ದ ಸಂದರ್ಭದಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ ಕವಿತಾ, ಅರ್ಜುನ್ ಸರ್ಜಾ, ಪತ್ನಿ ಆಶಾ ರಾಣಿ ದಂಪತಿಗಳು ಅದ್ಧೂರಿ ಸ್ವಾಗತ ನೀಡಿ ಸತ್ಕರಿಸಿದರು.
ಕವಿತಾ ದೇಗುಲ ಭೇಟಿಯಿಂದ ನನಗೆ ಸಂತೋಷವಾಗಿದೆ ತಮಿಳುನಾಡಿನ ಅಸ್ತಿತ್ವವು ಅತ್ಯಂತ ಶ್ರೀಮಂತವಾಗಿದೆ. ಜನರು ಸ್ಪೂರ್ತಿದಾಯಕವಾಗಿದ್ದಾರೆ. ತಮಿಳುನಾಡಿನ ಜನರು ತಮ್ಮ ಸಂಸ್ಕೃತಿ, ಭಾಷೆ ಮತ್ತು ಐತಿಹಾಸಿಕ ಪರಂಪರೆ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಪ್ರತಿಯೊಬ್ಬರೂ ಆ ಗೌರವವನ್ನು ಹೊಂದಿರಬೇಕು ಎಂದು ಕವಿತಾ ಕರೆ ನೀಡಿದ್ದಾರೆ.
ದೇಶದಲ್ಲೇ ಅತಿ ದೊಡ್ಡ ಹನುಮಾನ್ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ ಅವರನ್ನು ಕವಿತಾ ಮನಸಾರೆ ಅಭಿನಂದಿಸಿ ಕೊಂಡಾಡಿದ್ದಾರೆ. ಈ ದೇಗುಲಕ್ಕೆ ಭೇಟಿ ನೀಡಿದ್ದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದು ಭಾವುಕರಾಗಿ ಹೇಳಿದರು.
ಹನುಮಂತನ ಭಕ್ತರಾಗಿರುವ ಅರ್ಜುನ್ ಸರ್ಜಾ ಅವರ 17 ವರ್ಷಗಳ ಕನಸು ಈ ಮಂದಿರ ನಿರ್ಮಾಣದಿಂದ ನನಸಾಗಿದೆ ಎಂದು ತಿಳಿಸಿದರು. ಆ ದೇವಸ್ಥಾನದಲ್ಲಿ 35 ಅಡಿ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಅರ್ಜುನ್ ಸರ್ಜಾ ಈ ಹನುಮಾನ್ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ಕುಂಭಾಭಿಷೇಕ ನೆರವೇರಿಸಿದ್ದನ್ನು ಸ್ಮರಿಸಬಹುದಾಗಿದೆ.
ದೇವಸ್ಥಾನದ ಟ್ರಸ್ಟಿಯಾಗಿ ಅರ್ಜುನ್, ತಮ್ಮ ಪತ್ನಿ ಆಶಾರಾಣಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ, ತಮಿಳು, ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ಆಕ್ಷನ್ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕ್ರಿಯೇಟಿವ್ ಡೈರೆಕ್ಟರ್ ಕೃಷ್ಣವಂಶಿ ನಿರ್ದೇಶನದ ಶ್ರೀ ಆಂಜನೇಯನಲ್ಲಿ ಅರ್ಜುನ್ ಆಂಜನೇಯಸ್ವಾಮಿ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು ಎನ್ನುವುದು ಮುಖ್ಯ. ಫೇಸ್ ಬುಕ್, ವಾಟ್ಸ್ ಅಪ್ ನಲ್ಲಿ ಕವಿತಾ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ವೈರಲ್ ಆಗಿದೆ.