i
ಸಮ್ಮೇಳನಾಧ್ಯಕ್ಷ ಕರಿಯಪ್ಪಮಾಳಿಗೆಗೆ ಅದ್ಧೂರಿ ಮೆರವಣಿಗೆ, ಕನ್ನಡ ಭಾಷೆ ಉಳಿಸಿ ಬೆಳೆಸಬೇಕಿದೆ:ಡಾ.ಜೆ.ಕರಿಯಪ್ಪಮಾಳಿಗೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕನ್ನಡ ಭಾಷೆಯು ಅನ್ನದ ಭಾ?ಯಾಗಬೇಕಿದೆ, ಕನ್ನಡ ಭಾಷೆ ಈ ಹಿಂದೆ ಸಾರ್ವಭೌಮ ಭಾಷೆಯಾಗಿದ್ದು, ಈಗ ಸಾಮಂತ ಭಾ?ಯಾಗಿದೆ, ನೃಪತುಂಗನ ಕಾಲದಲ್ಲಿ ಅನ್ಯ ಭಾ?ಗಳ ಬೆಳವಣಿಗೆ ಕನ್ನಡದ ಸತ್ವವನ್ನು ಕುಗ್ಗಿಸಿತು, ಇಂದು ನಮ್ಮ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಬಗ್ಗೆ ಪ್ರತಿಯೊಬ್ಬರೂ ಆಲೋಚನೆ ಮಾಡಬೇಕಿದೆ ಎಂಬುದಾಗಿ ಪ್ರಾಧ್ಯಾಪಕರಾದ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಶನಿವಾರದಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ದಿ.ಯಳನಾಡು ಅಂಜಿನಪ್ಪ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೬ ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ಈ ನೆಲ, ಜಲ, ಭಾ?, ಸಮುದಾಯದ ಬಗ್ಗೆ ಪ್ರೀತಿಯಿರಬೇಕು, ಕನ್ನಡವೆಂದರೆ ಬರೀ ನುಡಿಯಲ್ಲ, ಬದುಕಿನ ಪ್ರೀತಿ, ಬದುಕಿನ ಜವಾಬ್ದಾರಿ ಎಂಬುದು ನಮಗೆ ಗೋತ್ತಾಗಬೇಕಿದೆ, ಇಂದಿನ ವರ್ತಮಾನ ನಮಗೆ ಗೊತ್ತಾಗಬೇಕಾದರೆ ಹಿಂದಿನ ಇತಿಹಾಸ, ಪರಂಪರೆ ಅರ್ಥಮಾಡಿಕೊಳ್ಳಬೇಕಿದೆ, ಭಾಷೆ ಬಿಕ್ಕಟ್ಟಿನ ಸಂಕೇತವಾಗದೇ, ಹೋರಾಟದ ಸಂಕೇತವಾಗಬೇಕಿದೆ ಎಂಬುದಾಗಿ ಹೇಳಿದರು.
ಇಂದಿನ ಆಧುನಿಕ ಸಂಸ್ಕೃತಿಯ ದಾಳಿಯಿಂದ ಗ್ರಾಮೀಣ ಸಂಸ್ಕೃತಿ ನರಳುತ್ತಿದ್ದು, ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಉಳಿದಿರುವುದು ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ, ಕನ್ನಡ ಸಾಹಿತ್ಯ, ಜನಪದ ಸತ್ವವನ್ನು ಉಳಿಸುವ ಕೆಲಸವಾಗಬೇಕಲ್ಲದೆ, ಕನ್ನಡ ಸಾಹಿತ್ಯ, ಕನ್ನಡ ಮಾಧ್ಯಮದಲ್ಲಿ ಓದಿದರೆ ಉದ್ಯೋಗ ಸಿಗುವುದಿಲ್ಲವೆಂಬ ಭಾವನೆಯಿಂದ ಜನರು ಆಂಗ್ಲಭಾ?ಯ ಮೊರೆ ಹೋಗುತ್ತಿದ್ದು, ಸರ್ಕಾರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ನೀಡಿದರೆ, ಕನ್ನಡ ಭಾ? ಬೆಳೆಯಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಕನ್ನಡಿಗರು ಸಂಘಟಿತರಾಗುವ ಮೂಲಕ ಕನ್ನಡಪರ ಧ್ವನಿಯಾಗಬೇಕು ಎಂಬುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿಗಳಾದ ಬಂಜಿಗೆರೆ ಜಯಪ್ರಕಾಶ್ ಮಾತನಾಡಿ, ಜನರ ಬದುಕನ್ನು ಹಸನಾಗಿಸಲು ಯಾವ ಆಡಳಿತಗಾರ ಬಯಸುತ್ತಾನೆಯೋ, ಅವನು ನೂರುಕಾಲ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುತ್ತಾನೆ, ಅಂತಹ ಆಡಳಿತಗಾರರಾಗಿ ಜನರ ಮನಗೆದ್ದ ನಾಲ್ವಡಿ ಕೃಷ್ಣರಾಜ ಒಡೆಯರವರು ತಾಲ್ಲೂಕಿನಲ್ಲಿ ವಾಣಿವಿಲಾಸ ಜಲಾಶಯವನ್ನು ನಿರ್ಮಿಸಿ, ರೈತರ ಬದುಕಿಗೆ ಆಧಾರವಾಗಿರುವುದನ್ನು ಇಂದು ನಾವೆಲ್ಲರೂ ಸ್ಮರಿಸಬೇಕಿದೆ ಎಂಬುದಾಗಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸಂತರು ಹಾಗೂ ಅವಧೂತರು ಸರ್ವಜನಾಧಾರಣೆ, ಏಕತೆಯ ಭಾವನೆ, ಸಮಾನ ಮನೋಭಾವನೆಯನ್ನು ಹುಟ್ಟು ಹಾಕಿದರು, ಸಂಕ?ದಲ್ಲಿರುವ ಜನರಿಗೆ ಸಾಂತ್ವನ ಕೇಂದ್ರಗಳಂತೆ ಕೆಲಸಮಾಡಿ, ಜನರಲ್ಲಿ ಮಾನವೀಯತೆ, ಸಮಾನತೆ, ಸಹಿ?ತೆ, ಪ್ರಜ್ಞೆಯನ್ನು ಮೂಡಿಸಿದರು, ಸಮಾಜದಲ್ಲಿನ ಮೌಢ್ಯಗಳನ್ನು ದೂರಮಾಡಿ, ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡಿದರು ಎಂದರು.
ರಾಜ್ಯ ಪ್ರವರ್ಗ-೧ ರ ಅಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಈ ವ?ದಲ್ಲಿ ವರುಣನ ಕೃಪೆಯಿಂದ ವಾಣಿವಿಲಾಸ ಸಾಗರ ಜಲಾಶಯ ಸುಮಾರು ೮೯ ವ?ಗಳ ನಂತರ ತುಂಬಿ, ಕೋಡಿ ಹರಿದಿದ್ದು ತಾಲ್ಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ, ಇಂತಹ ಜಲಾಶಯವನ್ನುನಿರ್ಮಿಸಲು ಕಾರಣರಾದ ಮೈಸೂರು ಮಹಾರಾಜ ನಾಲ್ವಡಿ ಕೃ?ರಾಜ ಒಡೆಯರು ಹಾಗೂ ಅವರ ತಾಯಿಯವರ ಪ್ರತಿಮೆಗಳನ್ನು ನಮ್ಮ ಕುಟುಂಬದ ವತಿಯಿಂದ ಜಲಾಶಯದ ಮುಂಭಾಗದಲ್ಲಿ ನಿಲ್ಲಿಸುವಂತಹ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸರ್ಕಾರದಿಂದ ಅನುಮತಿ ಪಡೆದು ಶೀಘ್ರದಲ್ಲೇ ಪ್ರತಿ?ಪಿಸಲಾಗುವುದು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಾದ ಹಿರಿಯ ಸಾಹಿತಿಗಳು, ಕವಿಗಳು, ಹಿರಿಯ ಪತ್ರಕರ್ತರುಗಳಿಗೆ ಕನ್ನಡ ಸಾಹಿತ್ಯ ಪರಿ?ತ್ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ, ಗೌರವಿಸಲಾಯಿತು.
ಆರಂಭದಲ್ಲಿ ಸಮ್ಮೇಳನ ಅಧ್ಯಕ್ಷರಾದ ಡಾ.ಕರಿಯಪ್ಪ ಮಾಳಿಗೆಯವರನ್ನು ನಗರದ ತೇರುಮಲ್ಲೇಶ್ವರ ದೇವಸ್ಥಾನದಿಂದ ಬೆಳ್ಳಿರಥದಲ್ಲಿ ಕುಳ್ಳಿರಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕ.ಸಾ.ಪ.ಜಿಲ್ಲಾ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷರಾದ ಡಾ.ಎಂ.ವಿ.ನಾಗೇಶ್, ಗೌರವ ಕಾರ್ಯದರ್ಶಿಗಳಾದ ಹೆಚ್.ಕೃ?ಮೂರ್ತಿ, ಅಸ್ಗರ್ ಅಹಮದ್, ಪದಾಧಿಕಾರಿಗಳಾದ ಹರ್ತಿಕೋಟೆ ಮಹಾಸ್ವಾಮಿ, ಬಿ.ಜಿ.ಪದ್ಮನಾಬ್, ಮಹಮ್ಮದ್ ಅಬ್ಬಾಸ್, ಎಸ್.ಮಹದೇವ್, ಹೆಚ್.ಎಸ್.ಮಹೇಶ್, ವಿಜಯ್, ಗೋಸಿಕೆರೆ ರಂಗನಾಥ್, ಜಗದೀಶ್ ಯಾದವ್, ಜಿ.ಆರ್.ನಂದವರಿಕ್, ಬಿ.ಯೋಗಾನಂದ್, ಪಿ.ಅಂಬಿಕಾ, ಭಾಗ್ಯಲಕ್ಷ್ಮೀ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.