i
ಲೋಕಾಯುಕ್ತ ದಾಳಿ, ಬಿಸಿಎಂ ವಿಸ್ತರಣಾಧಿಕಾರಿ ಬಂಧನ, ಜೈಲುಪಾಲು…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಗುತ್ತಿಗೆ ಆಧಾರದ ಮೇಲೆ ಕಾರು ಬಾಡಿಗೆ ಪಡೆದಿದ್ದರ ಬಾಡಿಗೆ ಬಿಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಲಂಚ ಸ್ಪೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಕಂಬಿ ಎಣಿಸುತ್ತಿದ್ದಾನೆ.
ಆರೋಪಿ ಬಿಸಿಎಂ ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿ ಶಿವರಾಜ್ ಎಲಿಗಾರ್ ಗುತ್ತಿಗೆ ನೀಡಲಾಗಿದ್ದ ಕಾರು ಮಾಲೀಕರಿಂದ 34 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಲಂಚದ ಹಣ ಸ್ಪೀಕರಿಸುವಾಗ ಲೋಕಾಯುಕ್ತರ ದಾಳಿ ಮಾಡಿ ಲಂಚದ ಹಣ ಸಮೇತ ಆರೋಪಿಯನ್ನು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಬಿಸಿಎಂ ಇಲಾಖೆಗೆ ಕಾರನ್ನ ತಿಂಗಳ ಬಾಡಿಗೆ ಆಧಾರ ಮೇಲೆ ಬಿಟ್ಟಿದ್ದ ವ್ಯಕ್ತಿಯೊಬ್ಬರಿಗೆ ಕಾರು ಬಿಲ್ ಮಾಡಲು 34 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ 34 ಸಾವಿರ ರೂ.ಲಂಚ ಸ್ಪೀಕರಿಸುವಾಗಿ ತುಮಕೂರು ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಹರೀಶ್, ಸಿಪಿಐಗಳಾದ ಸಲೀಂ, ರಾಮರೆಡ್ಡಿ ಇವರುಗಳ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ.