i
ಪಪ್ಪಿ, ಎಸ್ಕೆಬಿ ಔಟ್, ಚಿತ್ರದುರ್ಗ-ದಾವಣಗೆರೆ-ತುಮಕೂರು-ಬಳ್ಳಾರಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ನಡೆಸಿದ್ದು ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಹೈಕಮಾಂಡ್ ಒಪ್ಪಿಗೆ ಕಳುಹಿಸಿದೆ. ಅದೇ ರೀತಿ ರಾಜ್ಯದ ಇತರೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಮಾಡಿ ಒಪ್ಪಿಗೆಗೆ ಕಳುಹಿಸಿದೆ ಎನ್ನುವ ಪಕ್ಕಾ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವನೀಯ ಪಟ್ಟಿ ಬಹಿರಂಗವಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಗೆ ಯಾರಿಗೆ ಯಾವ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಸಂಭವನೀಯ ಪಟ್ಟಿ ಶೀಘ್ರವೇ ಪ್ರಕಟಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಉನ್ನತ ಮೂಲಗಳ ಪ್ರಕಾರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಕೇಂದ್ರದ ಹೈಕಮಾಂಡ್ ಒಪ್ಪಿಗೆಗೆ ಕಳುಹಿಸಲಾಗಿದ್ದು ಶೀಘ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೋಟೆ ನಾಡಿನಲ್ಲಿ ತೀವ್ರ ಪೈಪೋಟಿ ಕಂಡು ಬಂದಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ರಘು ಆಚಾರ್ ಹೆಸರು ಸಂಭವನೀಯ ಪಟ್ಟಿಯಲ್ಲಿ ಇದೆ. ಆದರೆ ವೀರೇಂದ್ರ ಪಪ್ಪಿ ಮತ್ತು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಸಂಭವನೀಯ ಪಟ್ಟಿಯಿಂದ ಔಟ್ ಆಗಿದ್ದಾರೆ.
ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಿಂದ ಯಾರಿಗೆ ಯಾವ ಕ್ಷೇತ್ರಕ್ಕೆ ಟಿಕೆಟ್ ಎನ್ನುವ ಪಟ್ಟಿ ಈ ಕೆಳಗಿದೆ.
ತುಮಕೂರು ಜಿಲ್ಲೆ-
ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್
ತುಮಕೂರು ಗ್ರಾಮಾಂತರ- ರವಿ, ಸೂರ್ಯ ಮುಕುಂದರಾಜು
ಕೊರಟಗೆರೆ- ಡಾ.ಜಿ.ಪರಮೇಶ್ವರ್
ಮಧುಗಿರಿ- ಕೆ.ಎನ್.ರಾಜಣ್ಣ
ಗುಬ್ಬಿ- ಶ್ರೀನಿವಾಸ್ (ಶಾಸಕ)
ಕುಣಿಗಲ್- ರಂಗನಾಥ್(ಶಾಸಕ)
ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು, ಸಿ ಎಂ ಧನಂಜಯ್
ತಿಪಟೂರು- ಷಡಕ್ಷರಿ, ಮಾಜಿ ಡಿವೈಎಪಿ ಲೊಕೇಶ್
ತುರುವೇಕೆರೆ- ಬೆಮೆಲ್ ಕಾಂತರಾಜು (ಮಾಜಿ ಎಂಎಲ್ಸಿ)
ಶಿರಾ- ಟಿ.ಬಿ ಜಯಚಂದ್ರ(ಮಾಜಿ ಶಾಸಕ)
ಪಾವಗಡ- ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್
ಚಿತ್ರದುರ್ಗ ಜಿಲ್ಲೆ-
ಚಿತ್ರದುರ್ಗ- ರಘು ಆಚಾರ್( ಎಂಎಲ್ಸಿ)
ಹೊಳಲ್ಕೆರೆ – ಹೆಚ್.ಆಂಜನೇಯ( ಮಾಜಿ ಸಚಿವ)
ಹೊಸದುರ್ಗ- ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)
ಹಿರಿಯೂರು- ಡಿ.ಸುಧಾಕರ್( ಮಾಜಿ ಶಾಸಕ)
ಚಳ್ಳಕೆರೆ- ಟಿ.ರಘು ಮೂರ್ತಿ( ಶಾಸಕ)
ಮೊಳಕಾಲ್ಮೂರು- ಯೋಗೇಶ್ ಬಾಬು
ದಾವಣಗೆರೆ ಜಿಲ್ಲೆ-
ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ
ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)
ಜಗಳೂರು- ಹೆಚ್.ಪಿ.ರಾಜೇಶ್(ಮಾಜಿ ಶಾಸಕ)
ಮಾಯಕೊಂಡ- ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ
ಹರಿಹರ- ರಾಮಪ್ಪ (ಶಾಸಕ)ದೇವೇಂದ್ರಪ್ಪ, ನಾಗೇಂದ್ರಪ್ಪ
ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ
ಚನ್ನಗಿರಿ- ವಡ್ನಾಳ್ ರಾಜಣ್ಣ, ತಮ್ಮ ಅಶೋಕ್
ಬಳ್ಳಾರಿ, ವಿಜಯನಗರ ಜಿಲ್ಲೆ-
ಬಳ್ಳಾರಿ ನಗರ-ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು
ಬಳ್ಳಾರಿ ಗ್ರಾಮಾಂತರ- ನಾಗೇಂದ್ರ( ಶಾಸಕ)
ಸಂಡೂರು- ತುಕಾರಾಂ( ಶಾಸಕ)
ಕೂಡ್ಲಿಗಿ- ನಾಗರಾಜು,ಶ್ರೀನಿವಾಸ್
ಕಂಪ್ಲಿ – ಗಣೇಶ್( ಶಾಸಕ)
ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ್( ಶಾಸಕ)
ಹೊಸಪೇಟೆ- ಗವಿಯಪ್ಪ, ರಾಜಶೇಖರ್ ಹಿಟ್ನಾಳ್, ಘೋರ್ಪಡೆ
ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್, ವೀಣಾ ಮಹಾಂತೇಶ್
ಸಿರಗುಪ್ಪ- ಬಿ.ಎಂ.ನಾಗರಾಜು, ಮುರುಳಿಕೃಷ್ಣ