i
ವಿದ್ಯಾಭ್ಯಾಸವು ಕೈಗಾರಿಕೆಗೆ ಮತ್ತು ಸಂಶೋಧನೆಗೆ ಸಹಕಾರಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ ಇಂದು ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ವತಿಯಿಂದ “ಸ್ಪೆಕ್ಟ್ರಲ್ ಅನಾಲಿಸಿಸ್ ಆಫ್ ಆರ್ಗನಿಕ್ ಕಂಪೌಂಡ್ಸ್” ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಗಾರ ಉದ್ಘಾಟಿಸಿ ಪ್ರಾಂಶುಪಾಲ ಡಾ.ಟಿ.ಎಸ್.ನಾಗರಾಜ್ ಮಾತನಾಡಿ ಇಂಥ ಕಾರ್ಯಗಾರವು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ಕೈಗಾರಿಕೆಗೆ ಮತ್ತು ಸಂಶೋಧನೆಗೆ ಸಹಾಯವಾಗುತ್ತದೆ. ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ, ಮಣಿಪಾಲ್ ಕಾಲೇಜ್ ಆಫ್ ಫಾರ್ಮಸಿ ಸಹ ಪ್ರಾಧ್ಯಾಪಕ ಡಾ.ವಿಜಯ ಭಾಸ್ಕರ್.ಕೆ ಮಾತನಾಡಿ ಕಾರ್ಯಗಾರ ನಡೆಸಿ ಔಷಧ ತಯಾರಿಕಾ ವಿಧಾನದಲ್ಲಿ ಬಳಸುವ ಔಷಧಿಯ ರಾಸಾಯನಿಕಗಳ ತಪಾಸಣೆ ಮಾಡುವ ಹಾಗೂ ಅವುಗಳ ವಿವಿಧ ರೀತಿಯ ಉಪಕರಣಗಳಾದ ಐಆರ್, ಎನ್ಎಂಆರ್ ಹಾಗೂ ಮಾಸ್ ಉಪಕರಣಗಳ ಕಾರ್ಯ ನಿರ್ವಹಣೆ ಮತ್ತು ಈ ಉಪಕರಣಗಳ ಬಳಸಿ ಹೇಗೆ ಔಷಧಿ ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆಗೆ ಬಳಸುವ ರೀತಿ ಹೇಗೆ ಸಂಶೋಧನೆಗೆ ಪೂರ್ವಕವಾಗಿ ಬಳಸುವ ವಿಧಾನಗಳನ್ನು ವಿವರಿಸಿದರು.
ಈ ಕಾರ್ಯಕ್ರಮವನ್ನು ಡಾ. ವಿಜಯಕುಮಾರ್ ಎಂ ಎಂ ಜೆ ನಿರ್ವಹಣೆಯನ್ನು ಹಾಗೂ ಡಾ. ಬಸವರಾಜ್ ಎಚ್ಎಸ್ ಸಂಯೋಜಕರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಎಂ ಫಾರ್ಮಾ ಫಾರ್ಮಸಿಟಿಕಲ್ ಕೆಮಿಸ್ಟ್ರಿ , ಔಷಧೀಯ ತಯಾರಿಕಾ ವಿಭಾಗ ಮತ್ತು ಔಷಧಿಯ ಗುಣ ಶಾಸ್ತ್ರದ ವಿದ್ಯಾರ್ಥಿಗಳು ಲಾಭವನ್ನು ಪಡೆದರು. ಅಕ್ಷಯ ಚೋಪ್ರಾ ಸ್ವಾಗತಿಸಿದರು. ಅನುಶ್ರೀ ನಿರೂಪಿಸಿದರು. ಕಾವ್ಯ ವಂದಿಸಿದರು.