i
ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯ ವಿಜೇತ ಮಹಿಳಾ ಶಿಕ್ಷಕರಿಗೆ ಅದ್ಧೂರಿ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿತ್ರದುರ್ಗ ತಾಲ್ಲೂಕು ಶಾಖೆ ವತಿಯಿಂದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕರಿಗೆ /CRP/BRP/ರವರಿಗೆ “ಆನ್ಲೈನ್ ಮುಖೇನ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿಜೇತರಾದ ಮಹಿಳಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ “ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾದ ಮಾರಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಂತಹ ಕಾರ್ಯಕ್ರಮ ಮಹಿಳೆಯರಿಗೆ ಒಂದು ಆತ್ಮ ವಿಶ್ವಾಸ ಹೆಚ್ಚಿಸಲು ಸಹಾಯಕ ಎಂದು ತಿಳಿಸಿ ಕೆಲವು ತತ್ವಪದಗಳನ್ನು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಜ್ಯೋತಿ ಲಕ್ಷ್ಮಿ, ಮಹಿಳೆಯರು ಇಂದಿನ ದಿನಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಮಹಿಳಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳು ಉತ್ತಮ ಪ್ರಗತಿಯ ಆಗಲಿ ಎಂದು ವ್ಯಕ್ತಪಡಿಸಿದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಈ.ಸಂಪತ್ ಕುಮಾರ್ ಮಾತನಾಡಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿನೂತನವಾದ ಕಾರ್ಯಕ್ರಮ ಮತ್ತು ಕಲಿಕೆಗೆ ಪೂರಕವಾದ ಚಟುವಟಿಕೆ ರಸ ಪ್ರಶ್ನೆ ಕಾರ್ಯಕ್ರಮ ಮಾಡುವ ಮೂಲಕ ಶಿಕ್ಷಕರಿಗೆ ಪೋತ್ಸಾಹ ಮತ್ತು ಉತ್ತೇಜನ ನೀಡುತ್ತಿರುವ ಸಂಘದ ಬಗ್ಗೆ ಹೆಮ್ಮೆ ಇದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ರಾಜುನಾಯ್ಕ.ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸಮಾಜದ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ತ್ಯಾಗ ಬಲಿದಾನ ಮೂಲಕ ಸುಂದರ ಸಮಾಜದ ಕಟ್ಟಲು ಪುರಾತನ ಕಾಲದಿಂದಲೂ ನಮಗೆ ಕೊಡುಗೆಯಾಗಿ ಬಂದಿದ್ದಾರೆ. ಇಂದು ಇಂತಹ ವಿಶೇಷ ದಿನಗಳಲ್ಲಿ ಮಹಿಳೆಯರನ್ನು ಗೌರವಿಸುವ ಮೂಲಕ ನಾವು ಹೆಮ್ಮೆ ಇಡಬೇಕೆಂದರು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಬಿ. ಹೆಚ್. ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಹನುಮಂತಪ್ಪ, ಜಿಲ್ಲಾ ಖಜಾಂಚಿ ವಿರೇಶ್, ಎಸ್.ವಿರಣ್ಣ, ಮಹಂತೇಶ್, ವಿರಣ್ಣ, ಮಲ್ಲಿಕಾರ್ಜುನ, ಮಲ್ಲಿಕಾರ್ಜುನಯ್ಯ, ರವಿಶಂಕರ್, ಲೋಲಾಕ್ಷಮ್ಮ, ರೂಪಾ, ಗೀತಾ, ಉಷಾ, ಸುಧಾ, ಪರ್ವಿನ್ ತಾಜ್, ದುರುಗೇಶ್, ರಂಗಸ್ವಾಮಿ, ರಂಗೇಶ್, ನವೀನ್ ಸೇರಿದಂತೆ ಸಂಘದ ಇತರೆ ಪದಾಧಿಕಾರಿಗಳು ನಿರ್ದೇಶಕರು ನಾಮ ನಿರ್ದೇಶಕರು ಹಾಗೂ ಶಿಕ್ಷಕರು ಹಾಜರಿದ್ದರು.
ಅನ್ ಲೈನ್ ರಸ ಪ್ರಶ್ನೆ ಸ್ವಧೆಯಲ್ಲಿ ವಿಜೇತ ಶಿಕ್ಷಕಿಯರಾದ ಶಿಲ್ಪಾ ಪ್ರಥಮ, ಶಶಿಕಲ್ ದ್ವಿತೀಯ, ವಸಂತ ತೃತೀಯ ಬಹುಮಾನ ಪಡೆದರು.
ಶಿಕ್ಷಕಿಯರಾದ ಶಶಿಕಲಾ, ಪುಷ್ಪ, ರಾಜೇಶ್ವರಿ, ಜಮರುದಿ ಪರ್ವಿನ್, ಸುಧಾ, ಕಮಲಾಕ್ಷಿ, ತಬ್ರೇಜ್ ಉನ್ನಿಸಾ, ಬಿಂದು, ಹೇಮಲತಾ, ನಳಿನಾಕ್ಷಿ ಇವರುಗಳಿಗೆ ಸಮಾಧಾನಕರ ಬಹುಮಾನ ನೀಡಿ ಅಭಿನಂದಿಸಲಾಯಿತು.