i
ಸುಧಾಕರ್-ಪೂರ್ಣಿಮಾ ಇಂಥ ಪಕ್ಷದಿಂದ ಸ್ಪರ್ಧೆ ಎಂದು ಬೆಟ್ಟಿಂಗ್, ಬಾಜಿಕಟ್ಟಿ ನೋಡಬಾರೋ ಮೀಸೆ ಮಾವ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿಧಾನಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಗಮನಸೆಳೆಯುತ್ತವೆ. ರಾಜಕೀಯ ರಂಗು ಅನೇಕರ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ವಿಚಿತ್ರ ಘಟನೆಗಳು ಸಂಭವಿಸುತ್ತಿದ್ದು ಮೂರು ರಾಜಕೀಯ ಪಕ್ಷಗಳಲ್ಲಿ ಮಂಕುಕವಿದಿದೆ.
ಇನ್ನೂ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ ಎನ್ನುವ ಸುದ್ದಿ ಇಡೀ ಕ್ಷೇತ್ರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ನಂತರ ತಣ್ಣಗಾಯಿತು. ಕಾಂಗ್ರೆಸ್ ಟಿಕೆಟ್ ಸುಧಾಕರ್ ಕೈ ತಪ್ಪಲಿದೆ ಎನ್ನುವ ಮಾತುಗಳು ಜೋರಾಗಿ ಈಗಲೂ ಕೇಳಿ ಬರುತ್ತಿವೆ. ಇದರ ಮಧ್ಯ ಆದರೆ ಅಪ್ಪಟ ಅಭಿಮಾನಿಗಳು ಮಾತ್ರ ಸುಧಾಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಎಂದು ಬಾಜಿ(ಬೆಟ್ಟಿಂಗ್) ಕಟ್ಟುತ್ತಿದ್ದರೆ, ಪೂರ್ಣಿಮಾ ಶ್ರೀನಿವಾಸ್ ಅವರ ಅಪ್ಪಟ ಅಭಿಮಾನಿಗಳು ಕೂಡಾ ಪೂರ್ಣಿಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ಎಂದು ಬಾಜಿ ಕಟ್ಟಿರುವುದು ಕೇಳಿ ಬರುತ್ತಿದೆ.
ಪೂರ್ಣಿಮಾ ಅವರ ಅಭಿಮಾನಿಯೊಬ್ಬ ಅಕ್ಕನಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಯಾರು ಬೆಟ್ಟಿಂಗ್ ಕಟ್ಟುತ್ತೀರಿ ಎಂದು ಸಂದೇಶ ಹೊರ ಹಾಕಿದ್ದೆ ತಡ ಕಾಂಗ್ರೆಸ್ ಮತ್ತು ಸುಧಾಕರ್ ಅಪ್ಪಟ ಅಭಿಮಾನಿಗಳು ಮೊದಲು 20 ಸಾವಿರ ರೂ. ಬೆಟ್ಟಿಂಗ್ ಕಟ್ಟಿ ಕಾಂಗ್ರೆಸ್ ಟಿಕೆಟ್ ಯಾವುದೇ ಕಾರಣಕ್ಕೂ ಸುಧಾಕರ್ ಗೆ ತಪ್ಪುವುದಿಲ್ಲ, ಬೇಕಿದ್ದರೆ ಒಂದು ಲಕ್ಷ ಬೆಟ್ಟಿಂಗ್ ಕಟ್ಟುತ್ತೇವೆ, ನೀನು ರೆಡಿನಾ ಎಂದು ಸವಾಲ್ ಹಾಕಿದ್ದಾರೆ. ಪೂರ್ಣಿಮಾ ಅಭಿಮಾನಿ ಸದ್ಯಕ್ಕೆ 20 ಸಾವಿರ ರೂ. ಸಾಕು ಮುಂದೆ ನೋಡೋಣ ಎಂದು ಜಾರಿಕೊಂಡಿದ್ದು ಒಂದು ಹಳ್ಳಿಯ ಅಭಿಮಾನಿಗಳ ಸುದ್ದಿಯಾದರೆ ಕ್ಷೇತ್ರದ ಇತರೆ ಕಡೆಗಳಲ್ಲೂ ಬೆಟ್ಟಿಂಗ್ ಕಟ್ಟಲು ಸವಾಲ್ ಮತ್ತು ಪ್ರತಿ ಸವಾಲ್ ಹಾಕುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ.
ಟಿಕೆಟ್ ಆಕಾಂಕ್ಷಿಗಳು ಮಾತ್ರ ಸದ್ದಿಲ್ಲದೆ ಕಾಂಗ್ರೆಸ್ ಟಿಕೆಟ್ ಪಡೆಯಲು ಶತಪ್ರಯತ್ನ ಮಾಡುತ್ತಿರುವುದು ಕೂಡಾ ಗುಟ್ಟಾಗಿ ಉಳಿದಿಲ್ಲ.
ಇನ್ನೂ ಒಂದು ಸ್ಫೋಟಕ ವಿಷಯ ಎಂದರೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಮತ್ತು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಹಿರಿಯೂರು ಕ್ಷೇತ್ರದ ಹೊಣೆಗಾರಿಕೆ ನನಗಿರಲಿ, ಪೂರ್ಣಿಮಾ ಬದಲು ನೀನು ಸ್ಪರ್ಧೆ ಮಾಡು ನಾನು ನಿನ್ನನ್ನು ಗೆಲ್ಲಿಸಿಕೊಂಡು ಬರುತ್ತೇನೆಂದು ಕಾಡುಗೊಲ್ಲ ಮುಖಂಡನೊಬ್ಬನಿಗೆ ಉತ್ತೇಜನ ನೀಡಿ ಚುನಾವಣೆಗೆ ಸ್ಪರ್ಧಿಸಲು ತಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಕೂಡಾ ಹರಿದಾಡುತ್ತಿದೆ.
ಪೂರ್ಣಿಮಾ ಶ್ರೀನಿವಾಸ್ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿದ್ದು ನಂತರ ಯಡಿಯೂರಪ್ಪ ಸಂಧಾನದಿಂದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡ ನಂತರ ಸುದ್ದಿ ಮತ್ತೇ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿಗೆ ಬೇಡವೇ ಬೇಡ ಎನ್ನುವ ಕೂಗು ಜಿಲ್ಲಾ ಬಿಜೆಪಿಯಲ್ಲಿ ಎದ್ದಿದೆ ಎನ್ನಲಾಗುತ್ತಿದೆ.