
ಚಂದ್ರವಳ್ಳಿ ನ್ಯೂಸ್, ಮಳವಳ್ಳಿ: ಉಗ್ರಾಣದ ಬಾಡಿಗೆ ನಿಗದಿಪಡಿಸಲು ಟೆಂಡರ್ದಾರರಿಂದ 20 ಸಾವಿರ ರೂ. ಲಂಚ ಪಡೆಯುವಾಗ ಮಳವಳ್ಳಿ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಕೆ.ಸಿ.ಸಾಕಮ್ಮ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.
ತಾಲ್ಲೂಕಿನ ಕಲ್ಕುಣಿ ಗ್ರಾಮದ ಆನಂದ್ ಅವರು ಎಪಿಎಂಸಿ ಉಪವಿಭಾಗದ ಕಿರುಗಾವಲು ಕೇಂದ್ರದ ಉಗ್ರಾಣದ ಟೆಂಡರ್ ಪಡೆದಿದ್ದರು.ಕಡಿಮೆ ಬಾಡಿಗೆ ನಿಗದಿಪಡಿಸಲು ಕೆ.ಸಿ.ಸಾಕಮ್ಮ ಅವರು 50 ಸಾವಿರ ಲಂಚ ಕೇಳಿದ್ದು, 20 ಸಾವಿರಕ್ಕೆ ಒಪ್ಪಿದ್ದರು. ಆನಂದ್ ಮಂಡ್ಯದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ದಾಳಿ ಮಾಡಿ ಲಂಚದ ಹಣ ಸಮೇತ ಆರೋಪಗಳನ್ನು ಬಂಧಿಸಿದ್ದಾರೆ.
ಎಪಿಎಂಸಿ ಕಚೇರಿಯಲ್ಲಿ ಸಿಬ್ಬಂದಿ ಸಿದ್ದರಾಜು ಮೂಲಕ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ಇಬ್ಬರನ್ನೂ ಬಂಧಿಸಿದರು. ರಾಮನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.