i
ಶ್ರೀ ಶನೇಶ್ವರ ಸ್ವಾಮಿ ದೇವಸ್ಧಾನ ಅಭಿವೃದ್ದಿಗೆ 30 ಲಕ್ಷ ಮಂಜೂರು…
ಚಂದ್ರವಳ್ಳಿನ್ಯೂಸ್ ಹೊಸದುರ್ಗ:
ಹೊಸದುರ್ಗ ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಶ್ರೀ ಗುರು ಶನೇಶ್ವರ ಸ್ವಾಮಿ ದೇವಸ್ಧಾನದ ಕಾಮಗಾರಿ ಅಭಿವೃದ್ದಿಗೆ ಸರ್ಕಾರದಿಂದ 30 ಲಕ್ಷ ರೂ ಮಂಜೂರಾತಿಯಾಗಿದೆ ಎಂದು ಶಾಸಕ ಗೂಳಿಹಟ್ಟಿಶೇಖರ್ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಣದಲ್ಲಿ ನಾಲ್ಕುವರೆ ಲಕ್ಷ ರೂಗಳ ಕಾಮಗಾರಿ ಪ್ರಾರಂಭಗೊಂಡಿದೆ. ಉಳಿದ ಹಣವನ್ನ ಹಂತ ಹಂತವಾಗಿ ಬಿಡುಗಡೆ ಮಾಡಲಾಗವುದು ಎಂಬ ಆಶ್ವಾಸನೆ ನೀಡಿದ ಅವರು ನಾಡಿನಾದ್ಯಂತ ದೇವಾಲಯಗಳ ಅಭಿವೃದ್ದಿಗಳ ಕೆಲಸ ನಡೆಯುತ್ತಿದೆ ಹಾಗೆಯೇ ಹೊಸದುರ್ಗ ತಾಲೂಕಿನ ನಾನಾ ಕಡೆಗಳಲ್ಲೂ ಸಹಾ ದೇವಾಲಯ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ, ಹೊಸದುರ್ಗ ಪಟ್ಟಣದಲ್ಲಿರುವ ಶ್ರಿ ಶನೇಶ್ವರ ಸ್ವಾಮಿ ದೇವಾಲಯವು ಸಾಕಷ್ಟು ಭಕ್ತರ ಹೃದಯದಲ್ಲಿ ನೆಲಸಿದೆ. ನಿತ್ಯವೂ ಸಾಕಷ್ಟು ಮಂದಿ ಬಂದು ಸ್ವಾಮಿಯ ದರ್ಶನ ಪಡೆಯುತ್ತಾರೆ ಅಲ್ಲದೆ ಪ್ರತಿ ಶನಿವಾರ ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತಿದೆ ಪ್ರತಿ ವರ್ಷ ಶ್ರೀ ಸ್ವಾಮಿಯವರ ಜಯಂತಿ ಉತ್ಸವ ನಡೆಯಲಿದ್ದು ಬರುವ ಹೋಗುವ ಭಕ್ತರಿಗೆ ಅನ್ನಸಂರ್ಪಣೆ ನಡೆಯುವುದು ಈ ಅನ್ನ ಸಂತರ್ಪಣೆ ಮತ್ತು ಕಲ್ಯಾಣ ಕಾರ್ಯಗಳಿಗಾಗಿ ಭಕ್ತ ಮಂಡಳಿಯವರು ಬೃಹತ್ ಸಮುದಾಯ ಭವನವನ್ನ ನಿರ್ಮಿಸುತ್ತಿರುವುದು ಸಂತಸದ ವಿಷಯ ಎಂಬ ಹರ್ಷ ವ್ಯಕ್ತಪಡಿಸಿದ ಅವರು ಸ್ವಾಮಿಯ ದೇವಸ್ಧಾನ ಅಭವೃದ್ದಿ ಕಾರ್ಯ ನಡೆಯಬೇಕಿದ್ದು ಹೆಚ್ಚಿನದಾಗಿ ಸಹಕಾರ ನೀಡುವವರು ಶ್ರೀ ಗುರು ಶನೇಶ್ವರ ಭಕ್ತ ಮಂಡಲಿ ಖಾತೆ ನಂಬರ್ ೮೪೫೯೦೨೦೦೦೦೨೧೮೭ ಬ್ಯಾಂಕ್ ಅಫ್ ಬರೋಡ ಹೊಸದುರ್ಗ ಇಲ್ಲಿಗೆ ಜಮಾ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಗುರು ಶನೇಶ್ವರ ಭಕ್ತ ಮಂಡಲಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಧಿತರಿದ್ದರು.