i
ಶ್ರೀನಿವಾಸ್ ಉಚ್ಚಾಟನೆ ಆದೇಶ ರದ್ದು ಮಾಡಿದ ಬಿಜೆಪಿ, ಹಾಗಾದರೆ ಅಭ್ಯರ್ಥಿ ಪೂರ್ಣಿಮಾನೋ ಅಥವಾ ಪತಿ ಡಿಟಿಎಸೋ!?…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೆಡ್ಡೊಡೆದು ಬಂಡಾಯವಾಗಿ ಸ್ಪರ್ಧಿಸಿ ಉಚ್ಚಾಟನೆಗೊಂಡಿದ್ದ ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಅವರ ಉಚ್ಚಾಟನೆಯ ಆದೇಶವನ್ನು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಮಾ.30 ರಂದು ಹಿಂಪಡೆದಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದ ಶ್ರೀನಿವಾಸ್ ಅವರನ್ನು ದಿನಾಂಕ-23-10-2020ರಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಉಚ್ಚಾಟನೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ಈಗ 2023ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕಿ ಪೂರ್ಣಿಮಾ ಸ್ಪರ್ಧಿಸುತ್ತಾರೋ ಅಥವಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರ ಸ್ಪರ್ಧೆಗೆ ಅನುಕೂಲ ಕಲ್ಪಿಸಿ ಜಾಗ ಖಾಲಿ ಮಾಡುತ್ತಾರೋ ಸದ್ಯದಲ್ಲೇ ತಿಳಿಯಲಿದೆ.