i
ದ್ಯಾಮಲಾಂಬ ದೇವಿ ಅಮ್ಮನವರ ಜಾತ್ರಾ ಉತ್ಸವವು ಏ.9 ರಿಂದ 15 ವರೆಗೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ನೆಲೆಸಿರುವ ಶಕ್ತಿದೇವತೆ ಸುರಸುಂದರಿ ದ್ಯಾಮಲಾಂಬ ದೇವಿ ಅಮ್ಮನವರ ಜಾತ್ರಾ ಉತ್ಸವವು ಏ.9 ರಿಂದ 15 ವರೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಏ.9ರ ಭಾನುವಾರ ಸಂಜೆ 6.30ಕ್ಕೆ ಕಲ್ಯಾಣೋತ್ಸವ, 10 ಸೋಮವಾರ ಸಂಜೆ 6.30ಕ್ಕೆ ನವಿಲು ಉತ್ಸವ, 11 ಮಂಗಳವಾರ ಸಂಜೆ 6.30ಕ್ಕೆ ಅಶ್ವೋತ್ಸವ, 12ರ ಬುಧವಾರ ಸಂಜೆ 6.30ಕ್ಕೆ ಮೀಸಲು ಪೂಜೆ, 13 ಗುರುವಾರ ಬೆಳಗ್ಗೆ 7 ಗಂಟೆಗೆ ಗಜೋತ್ಸವ ಅದೇ ದಿನ ಸಂಜೆ 5 ಗಂಟೆಗೆ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಏ.14೨೧ ರ ಶುಕ್ರವಾರ ಸಂಜೆ 5 ಗಂಟೆಗೆ ಸಿಡಿ ಉತ್ಸವ, ಸಂಜೆ 7 ಗಂಟೆಗೆ ಶ್ರೀದೇವಿಯ ಹೂವಿನ ಪಲ್ಲಕ್ಕಿ ಉತ್ಸವ, 15ರ ಶನಿವಾರ ಬೆಳಗ್ಗೆ 7 ಗಂಟೆಗೆ ಅವಭೃತೋತ್ಸವ ಮತ್ತಿತರ ಪೂಜಾ ಕಾರ್ಯಗಳು ನಡೆಯಲಿವೆ.
ಗುಂಟನೂರು ದ್ಯಾಮಲಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಮೂಲೆ ಮೂಲೆಗಳಿಂದ ಹತ್ತಾರು ಸಾವಿರ ಭಕ್ತರು ರಥೋತ್ಸವಕ್ಕೆ ಆಗಮಿಸಲಿದ್ದು ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಹಶೀಲ್ದಾರ್ ನಾಗವೇಣಿ, ದ್ಯಾಮಲಾಂಬ ದೇವಸ್ಥಾನದ ಅಭಿವೃದ್ಧಿ ಸಮಿತಿ ಟ್ರಸ್ಟ್ ಅಧ್ಯಕ್ಷ ಈ.ಚಂದ್ರಣ್ಣ, ಕಾರ್ಯದರ್ಶಿ ಜಿ.ಹೆಚ್.ವಸಂತಕುಮಾರ್ ತಿಳಿಸಿದ್ದಾರೆ.