i
ಕಾಂಗ್ರೆಸ್ ಹೈ-ಕಮಾಂಡ್ ಕ್ಷಿಪ್ರ ಸಂದೇಶ ರವಾನೆ, ಪಲ್ಲವಿಗೆ ಟಿಕೆಟ್ ಸಾಧ್ಯತೆ?…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಗ್ರಾಮಾಂತರ ಮೀಸಲು ವಿಧಾನ ಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿದ್ದ ಪಲ್ಲವಿ. ಜಿ ರವರು ಸತತ 9 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಲ್ಲಿ ಸಮಾಜಸೇವಾ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದರು.
ಕಳೆದ 2018ರ ವಿಧಾನ ಸಭಾ ಚುನಾವಣೆಯಲ್ಲಿ ಆಂಕಾಕ್ಷಿಯಾಗಿದ್ದ ಪಲ್ಲವಿಯವರಿಗೆ ಪ್ರಬಲ ಪೈಪೋಟಿಯ ನಡುವೆ ಕಡೆಯ ಕ್ಷಣದಲ್ಲಿ ಹೈಕಮಾಂಡ್ ಇವರನ್ನು ಮನವೊಲಿಸಿದ್ದು, ಟಿಕೆಟ್ ನಿಂದ ವಂಚಿತರಾಗಿದ್ದರು.
ಆದರೆ ಈ ಬಾರಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದರೂ ಸಹ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಸಾಧಿಸಿದ್ದರಿಂದ ಕಾಂಗ್ರೆಸ್ ಎಲ್ಲಾ ಸಮಿಕ್ಷೆಗಳಲ್ಲಿಯೂ ಪಲ್ಲವಿಯವರ ಹೆಸರು ಮೊದಲ ಸ್ಥಾನದಲ್ಲಿ ಕಾಯ್ದುಕೊಳ್ಳವಲ್ಲಿ ಸಫಲರಾಗಿದ್ದರು. ಆದರೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ನಡುವಿನ ಜಾತಿ ಲಾಭಿಯಿಂದಾಗಿ ಗೊಂದಲ ಸೃಷ್ಟಿಯಾಗಿತ್ತು. ಆದಾಗ್ಯೂ ಸಹ ರಾಜ್ಯದ AKMS ಸಂಘಟನೆ, (ಕೊರಮ-ಕೊರಚ) ಕುಳುವ ಸಮಾಜದ ಏಕೈಕ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ರಾಜ್ಯಾದ್ಯಾಂತ ಒತ್ತಡ ಹೇರಿದ್ದು ಹಾಗೂ ಇವರಿಗೆ ಬೆಂಬಲವಾಗಿ ಅಹಿಂದ, ದಲಿತಪರ ಸಂಘಟನೆಗಳ ಒಕ್ಕೂಟಗಳು ನಿಂತಿದ್ದವು. ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಲೆಮಾರಿ ಕುಳುವ ಸಮಾಜಕ್ಕೆ ರಾಜಕೀಯ ನ್ಯಾಯ ಓದಗಿಸುವಂತೆ ಕಾಂಗ್ರೆಸ್ ನ ಹಿರಿಯ ನಾಯಕರನ್ನು ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರವನ್ನು ನಿಯೋಗಗಳು ನಿರಂತರವಾಗಿ ಸಂಪರ್ಕಿಸಿ ತೀವ್ರ ಒತ್ತಡ ಹೇರಿದ್ದರು.
ಈ ಎಲ್ಲಾ ಬೆಳವಣಿಗೆಯ ನಡುವೆಯು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷನಾಯಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ದೆಹಲಿ ಹೈಕಮಾಂಡ್ ಈ ಬಾರಿ ಸಾಮಾಜಿಕ ನ್ಯಾಯದ ತತ್ವದಡಿ ಮತ್ತು ಮಹಿಳಾ ಸಬಲೀಕರಣದ ಹಿತದೃಷ್ಟಿಯಿಂದ ಪಲ್ಲವಿಯವರ ಹೆಸರು ಬಹುತೇಕ ಅಖೈರುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಅಥವಾ ನಾಳೆ ಬೆಳಿಗ್ಗೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆ ಇದೆ. ಈ ನಡುವೆ ಕಳೆದ ಭಾರಿಯ ಪರಾಜಿತ ಅಭ್ಯರ್ಥಿ ಎಸ್.ಕೆ ಶ್ರೀನಿವಾಸ್ ಕರಿಯಣ್ಣ, ರವಿಕುಮಾರ್ ,ಬಲದೇವಕೃಷ್ಣ ಕ್ಷೇತ್ರದ ಟಿಕೆಟ್ಗಾಗಿ ತೀವ್ರ ಲಾಭಿ ನೆಡೆಸುತ್ತಿದ್ದಾರೆ. ಆದರೆ ಕಣದಲ್ಲಿರುವ ಜೆ.ಡಿ.ಎಸ್ ಮತ್ತು ಬಿ.ಜೆ ಪಿ ಅರ್ಭ್ಯರ್ಥಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ತೀವ್ರ ಕುತೂಹಲ ಮೂಡಿದ್ದು, ಪಲ್ಲವಿ ಜಿ ಯವರು ಹೆಸರು ಅಂತಿಮಗೊಳಿಸಲಾಗುತ್ತಿದೆ ಎಂಬ ಮಾಹಿತಿ ಬಲ್ಲಮೂಲಗಳಿಂದ ಲಭ್ಯವಾಗುತ್ತಿದ್ದ ಬೆನ್ನಲ್ಲೇ ಕ್ಷೇತ್ರದಲ್ಲಿ ಹೊಸ ಹುರುಪಿನ ವಾತವರಣ ಮೂಡಿದೆ. ಶಿವಮೊಗ್ಗ ಗ್ರಾ.ಕ್ಷೇತ್ರದ ಮತದಾರ ಪ್ರಭು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.