i
ಗೊಲ್ಲಹಳ್ಳಿಯ ಜೆಟ್ ರೂರಲ್ ಸ್ಕೂಲ್ ನಲ್ಲಿ ವಿಭಿನ್ನ, ವಿಶೇಷವಾಗಿ ನಡೆದ ಬೇಸಿಗೆ ಶಿಬಿರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಟ್ ರೂರಲ್ ಎಜುಕೇಷನ್ ಸೆಂಟರ್, ಗೊಲ್ಲಹಳ್ಳಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇಲ್ಲಿ ಕಳೆದ 15 ದಿನಗಳಿಂದ ಬೇಸಿಗೆ ಶಿಬಿರ ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಎಲ್ಲವೂ ವಿಶೇಷ ವಿಭಿನ್ನವಾಗಿತ್ತು. ಸುಮಾರು 6೦ ಕ್ಕೂ ಹೆಚ್ಚು ಹಳ್ಳಿಯ 400 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಶಿಬಿರದಲ್ಲಿ ಕಲೆ, ಚಿತ್ರಕಲೆ, ನೃತ್ಯ, ಸಂಗೀತ, ನಾಟಕ, ಕಂಸಾಳೆ, ದೊಡ್ಡಾಟ ಮುಂತಾದವುಗಳನ್ನು ಪರಿಣಿತ ತಜ್ಞರಿಂದ ಮಕ್ಕಳಿಗೆ ವಿಶೇಷವಾಗಿ ತರಬೇತಿ ನೀಡಲಾಗಿದೆ.
ಏಪ್ರಿಲ್ ೨ ರಿಂದ ಪ್ರಾರಂಭವಾಗಿದ್ದ ಈ ಶಿಬಿರ ಕೊನೆಯ ಹಂತಕ್ಕೆ ಬಂದು ತಲುಪಿದೆ, ಅಂದರೆ ನಾಳೆ ಏಪ್ರಿಲ್ ೧೬ರ ಭಾನುವಾರ ಸಂಜೆ ೪ ಗಂಟೆಯಿಂದ ಶಾಲೆಯಲ್ಲಿ ವಿಶೇಷವಾಗಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳ ಕಾರ್ಯಕ್ರಮ ಇರುತ್ತದೆ. ನಂತರ ಶಿಬಿರದಲ್ಲಿ ಪಾಲ್ಗೊಂಡಿದ್ದ ೧ ರಿಂದ ೧೦ನೇ ತರಗತಿವರೆಗಿನ ಮಕ್ಕಳ ಶಾಲಾ ವಾರ್ಷಿಕೊತ್ಸವವನ್ನು ಏರ್ಪಡಿಸಲಾಗಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ಜಯರಾಮ ರಾಯಪುರ ಐ.ಆರ್.ಎಸ್. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಕುವೆಂಪು ರಂಗಮಂದಿರವನ್ನು ಇವರು ಉದ್ಘಾಟನೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಎರಡು ನಾಟಕಗಳು ಹಾಗೂ ಪಟಕುಣಿತ, ಕಂಸಾಳೆ, ಗೀತಾಗಾಯನ, ೨೫ಕ್ಕೂ ಹೆಚ್ಚು ನೃತ್ಯಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತ, ಹೆಚ್ಚು ಹೆಚ್ಚು ಪೋಷಕರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಾಗೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ ಮನವಿ ಮಾಡಿದ್ದಾರೆ.