i
ಏಪ್ರಿಲ್-28ರಂದು ಮಾರಿಕಣಿವೆ ಗ್ರಾಮದ ಕಣಿವೆ ಮಾರಮ್ಮರಥೋತ್ಸವ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ವಾಣಿವಿಲಾಸ ಸಾಗರದ ಶ್ರೀ ಕಣಿವೆ ಮಾರಮ್ಮ ದೇವತೆಯ ಬ್ರಹ್ಮ ರಥೋತ್ಸವ ಏಪ್ರಿಲ್-28ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಹಿರಿಯೂರು ತಾಲೂಕಿನ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಆಗಮಿಸಿ ಭಕ್ತಿ ಭಾವದಿಂದ ಭಕ್ತಿ ಸಮರ್ಪಣೆ ಮಾಡಲಿದ್ದಾರೆ.
ರಥೋತ್ಸವದ ಅಂಗವಾಗಿ ಮೊದಲಿಂಗಿತ್ತಿ ಶಾಸ್ತ್ರದೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ಗಂಗಾ ಪೂಜೆ, ಜಲ್ದಿ ಉತ್ಸವ ಮತ್ತು ಮಾತೆಗೆ ಸುಮಂಗಲೆಯರಿಂದ ಆರತಿ ಕಾರ್ಯಕ್ರಮಗಳು ನಡೆಯಲಿವೆ. ಏ.28ರ ಶುಕ್ರವಾರ ಶ್ರೀ ಕಣಿವೆ ಮಾರಮ್ಮ ಮಾತೆಯನ್ನು ವಿಶೇಷ ಹೂವಿನ ಅಲಂಕಾರದೊಂದಿಗೆ ದೇವಸ್ಥಾನದಿಂದ ಕರೆತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಮಧ್ಯಾಹ್ನ 3 ಗಂಟೆಗೆ ಬ್ರಹ್ಮರಥೋತ್ಸವ ನಡೆಸಲಾಗುವುದು. 29ರ ಶನಿವಾರ ಸಿಡಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.