i
ಸಮಾಜಕ್ಕೆ ಭಗೀರಥ ಮಹರ್ಷಿಗಳ ಸೇವೆ ಅಪಾರ-ಯೋಗೇಶ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಉಪ್ಪಾರ ಸಮಾಜದ ಕುಲ ಗುರುಗಳು, ಮೂಲ ತಪಸ್ವಿ ಋಷಿಗಳಾದಂತಹ ಶ್ರೀ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಶಿವಮೊಗ್ಗ ಜಿಲ್ಲಾ ಉಪ್ಪಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ಗುರುವಾರ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯೋಗೇಶ್ ಮಾತನಾಡಿ, ನಿರಂತರ ತಪಸ್ಸಿನಿಂದ ದೇವಗಂಗೆ ಭೂಮಿಗಿಳಿಸಿದ ಮಹಾನ್ ತಪಸ್ವಿ ಭಗೀರಥ ವಂಶಸ್ಥದ ಪುಣ್ಯಾತ್ಮರು. ಉಪ್ಪಾರ ಸಮಾಜದವರು ಬಹಳ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದು ನಿಜವಾದ ಶ್ರಮಿಕರು. ಅವರ ಸೇವೆ ಸ್ಮರಣೀಯವಾದದ್ದು ಈಶ್ವರನ ಪತ್ನಿಯಾದ ದೇವಗಂಗೆಯನ್ನೇ ಭೂಮಿಗೆ ಇಳಿಸಿದಂತಹ ಮಹಾನ್ ತಪಸ್ವಿಯ ಜನ್ಮ ಭೂಮಿಯಲ್ಲಿ ನಾವು ಹುಟ್ಟಿ ಪುನೀತರಾಗಿದ್ದೇವೆ ಎಂದು ತಿಳಿಸಿದರು.
ಈ ಪುಣ್ಯ ಮಹಾಪುರುಷರ ಪುಣ್ಯಾದ ದಿನ. ಭಗಿರಥ ಜಯಂತಿಯ ದಿನಾಚರಣೆಯನ್ನು ಸರ್ಕಾರ ವತಿಯಿಂದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಚರಿಸುವ ಭಾಗ್ಯವನ್ನು ತಂದುಕೊಟ್ಟದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು.
ನಾವೆಲ್ಲರೂ ಒಟ್ಟಿಗೆ ಸೇರಿ ಮಹಾಪುರುಷನ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ದಿನಗಳು ಬಹಳ ಉಳಿದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ.ಎಸ್ . ಟಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಖಜಾಂಚಿ ಕಂಕರಿ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಮುಖಂಡ ಎಂಎಸ್ ಶಿವಕುಮಾರ್, ರಾಘವೇಂದ್ರ ಆರ್, ಉಪ್ಪಾರ ಸಮಾಜ ಮುಖಂಡರಾದ ಪ್ರಸನ್ನ ಕುಮಾರ್, ಮುರಳಿ ಸಣ್ಣಕ್ಕಿ, ಎಸ್ ಕೆ ಭಾಸ್ಕರ್ ಹಾಗೂ ವೈ.ಹೆಚ್.ನಾಗರಾಜ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್. ಮಾಲತೇಶ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಉಪ್ಪಾರ್ ಅಣ್ಣಪ್ಪ ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಉಮೇಶ್ ಸ್ವಾಗತಿಸಿದರು.