i
ಕರ್ನಾಟಕ ನಂಬರ್ ಒನ್ ರಾಜ್ಯ ಮಾಡಲು ಮತ್ತೊಮ್ಮೆ ಆಶಿರ್ವದಿಸಿ-ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಶಿಗ್ಗಾಂವಿ:
ಶಿಗ್ಗಾಂವಿ ಸವಣೂರು ತಾಲೂಕುಗಳನ್ನು ರಾಜ್ಯದ ನಂಬರ್ ತಾಲೂಕು ಮಾಡಲು ಹಾಗೂ ಹಾವೇರಿಯನ್ನು ರಾಜ್ಯದ ನಂಬರ್ ಒನ್ ಜಿಲ್ಲೆ ಹಾಗೂ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡಲು ಮತ್ತೊಮ್ಮೆ ಆಶೀರ್ವಾದ ಮಾಡಿ ನನ್ನನ್ನು ಆಯ್ಕೆ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ಇದು ಯಾವ ಜನ್ಮದ ಋಣಾನುಬಂಧವೋ ನಮ್ಮನ್ನು ಇಲ್ಲಿ ಕೂಡಿಸಿದೆ. ನಾನು ಎಷ್ಟೇ ಕೆಲಸ ಮಾಡಿದರೂ ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಅದು ಕಡಿಮೆ. ಇಲ್ಲಿನ ಶಾಸಕರು ಮುಖ್ಯಮಂತ್ರಿಯಾಗಿ ಈ ರಾಜ್ಯವನ್ನು ಮುನ್ನಡಿಸಿದರು. ಎಸ್ ನಿಜಲಿಂಗಪ್ಪ ಅವರು ಅವರೋಧ ಆಯ್ಕೆಯಾಗಿ ಕೆಲಸ ಮಾಡಿ ಗೌರವಯುತವಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಿಮ್ಮ ಮತದಿಂದ ಸಿಎಂ ಆಗಿದ್ದೇನಿ-ಇವತ್ತಿನ ಸ್ಪರ್ಧಾತ್ಮಕ ರಾಜಕಾರಣದಲ್ಲಿ ಹಾಗೂ ನೀವು ನನಗೆ ಕೊಟ್ಟಿರುವ ಬೆಂಬಲದಿಂದ 2018 ರ ಚುನಾವಣೆಯಲ್ಲಿ ನೀವು ನನಗೆ ಕೊಟ್ಟ ಮತದ ಶಕ್ತಿಯಿಂದ ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಕಲ್ಪನೆ ಇಟ್ಟುಕೊಂಡು ನಾನು ಕೆಲಸ ಮಾಡಿದ್ದೇನೆ. ನನ್ನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದೆ ಇಟ್ಟು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ಅಭಿವೃದ್ಧಿಯ ದೊಡ್ಡ ಪಟ್ಟಿ ಇದೆ- ಶಿಗ್ಗಾಂವಿ ನಗರಕ್ಕೆ ಕಳೆದ 5 ವರ್ಷದಲ್ಲಿ ನಾವು ಮಾಡಿರುವ ಕೆಲಸಗಳ ದೊಡ್ಡ ಪಟ್ಟಿ ಇದೆ. ನಗರೋತ್ಥಾನದ ಅಡಿಯಲ್ಲಿ 15 ಕೋಟಿ ಅಲ್ಲದೇ 25 ಕೋಟಿ ರೂ. ಹೆಚ್ಚುವರಿ ವಿಶೇಷ ಅನುದಾನ ಕೊಟ್ಟಿದ್ದೇನೆ. ಶಿಗ್ಗಾವಿಂಗೆ ಶುದ್ಧ ಕುಡಿಯುವ ನೀರು ಪಡೆಯುವುದು ಎಷ್ಟು ಕಷ್ಟ ಇತ್ತು ಅಂತ ತಮಗೆ ಗೊತ್ತಿದೆ. ನಿಮಗಾಗಿ ವರದಾ ನದಿಯಿಂದ ನೀರು ತಂದಿದ್ದೇನೆ. ಶಿಗ್ಗಾಂವಿಯ ಆಂತರಿಕ ನೀರು ವಿತರಣೆಗೆ 35 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದೇನೆ. ಶಿಗ್ಗಾಂವಿನ ಬಡಜನರಿಗೆ ಸ್ಲಂ ಬೋರ್ಡ್ನಿಂದ 750 ಮನೆ, ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ 5 ಲಕ್ಷದ ಮನೆಗಳನ್ನು 380 ಕುಟುಂಬಕ್ಕೆ ನೀಡಿದ್ದೇನೆ. ನನಗೆ ಇಷ್ಟಕ್ಕೆ ಸಮಾಧಾನ ಇಲ್ಲ. ಶಿಗ್ಗಾವಿ ಯ ಎಲ್ಲ ಬಡವರಿಗೂ ಸೂರು ಕಲ್ಪಿಸಲಾಗುವುದು. ಎಲ್ಲ ವಸತಿ ಯೋಜನೆಗಳಿಂದಲೂ ಐದು ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಉದ್ಯೋಗ ಪರ್ವ ಶುರುವಾಗಲಿದೆ-ಶಿಗ್ಗಾವಿ ಐಟಿಐ ಶಿಕ್ಷಣಕ್ಕೆ 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ಕೆ ಎಸ್ ಆರ್ಟಿಸಿ ಡಿಪೋದಲ್ಲಿ ಐಟಿಐ ಪ್ರತ್ಯೇಕವಾಗಿ ಮಾಡಿದ್ದೇವೆ. ಸರ್ಕಾರಿ ಟೂಲ್ ರೂಂ ಅನ್ನು 67 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭ ಆಗ್ತಿದೆ. ಸುಮಾರು 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್ ಟೈಲ್ ಪಾರ್ಕ್ ಏಳೆಂಟು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತದೆ. ಈಗಾಗಲೇ ಸಾಯಿ ಗಾರ್ಮೆಂಟ್ಸ್ ಆರಂಭ ಆಗಿದ್ದು ಅದರಲ್ಲಿ ಸುಮಾರು 2000 ಹೆಣ್ಣು ಮಕ್ಕಳಿಗೆ ಉದ್ಯೊಗ ದೊರೆಯಲಿದೆ. ಇಲ್ಲಿ ಖಾಸಗಿ ಸಿಬಿಎಸ್ ಸಿ ಶಾಲೆ ತೆರೆಯಲು ಅವಕಾಶ ಕಲ್ಪಿಸಲಾಗುವುದು. ಕಾರ್ಖಾನೆ ಬಂದರೆ, ಟ್ಯಾಕ್ಸಿ ಆಟೊ, ವ್ಯಾಪಾರ ಎಲ್ಲವೂ ಹೆಚ್ಚಾಗಿ ಶಿಗ್ಗಾಂವಿಯ ಆರ್ಥಿಕ ಬೆಳವಣಿಗೆ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಎಲ್ಲ ಸಮುದಾಯಕ್ಕೂ ನ್ಯಾಯ ಕೊಟ್ಟಿದ್ದೇನೆ-ಅಂಬೇಡ್ಕರ್ ಭವನ, ಜಗಜೀವನ್ ರಾಂ ಭವನ, ವಾಲ್ಮೀಕಿ ಭವನ, ಕಸಕದಾಸ ಸಂಘಕ್ಕೆ 3 ಕೋಟಿ, ಮರಾಠ ಸಮುದಾಯ ಸಂಘಕ್ಕೆ 3 ಕೋಟಿ, ವೀರಶೈವ ಪಂಚಮಸಾಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಸಮುದಾಯಕ್ಕೂ ಜಮೀನು ಕೊಡಿಸಿ ಅವರಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಸವಣ್ಣ, ಕನಕದಾಸರ ಧ್ಯೇಯ ಪಾಲನೆ ಮಾಡುತ್ತಿದ್ದೇನೆ-ಶಿಗ್ಗಾವಿಂಯ ಜನರ ಆರೋಗ್ಯಕ್ಕೆ 80 ಕೋಟಿ ವೆಚ್ಚದಲ್ಲಿ 250 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ನಾನು ಸಿಎಂ ಆದನಂತರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಇದನ್ನು ಎಲ್ಲ ದುಡಿಯುವ ವರ್ಗದ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡಿದ್ದೇನೆ. ಬಸವಣ್ಣನವರ, ಕನಕದಾಸರ ಧ್ಯೇಯ, ಆದರ್ಶಗಳನ್ನು ಪಾಲನೆ ಮಾಡಿ ಶಿಗ್ಗಾಂವಿಯನ್ನು ಕರ್ನಾಟಕದ ಭೂಪುಟದಲ್ಲಿ ನೋಡುವಂತೆ ಮಾಡಿದ್ದೇನೆ. ಹಲವಾರು ಸರ್ಕಾರಗಳು ಮಾಡಲಾಗದ ಕೆಲಸಗಳನ್ನು ನಿಮ್ಮ ಆಶೀರ್ವಾದದಿಂದ ನಿಮ್ಮ ಬಸವರಾಜ ಬೊಮ್ಮಾಯಿ ಮಾಡಿದ್ದಾನೆ. ಕೊವಿಡ್ ಬಂದಾಗ ಎಲ್ಲರಿಗೂ ಉಚಿತ ವ್ಯಾಕ್ಸಿನೇಷನ್ ಕೊಡಲಾಯಿತು. ಮೋದಿಯವರು ಕೊಟ್ಟಿರುವ ವ್ಯಾಕ್ಸಿನೇಷನ್ ನಿಂದ ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೈತರಿಗೆ ಡಬಲ್ ಎಂಜಿನ್ ಸರ್ಕಾರ ಅನುಕೂಲ ಮಾಡಿದೆ-ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಶಿಗ್ಗಾಂವಿಯಲ್ಲಿ ಬಡವರೂ ಆರ್ ಸಿಸಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಬೆಳೆ ಹಾನಿಗೆ ನಮ್ಮ ಡಬಲ್ ಎಂಜಿನ್ ಸರ್ಕಾರ ಡಬಲ್ ಪರಿಹಾರ ಕೊಟ್ಟಿದೆ. ಒಣ ಬೇಸಾಯಕ್ಕೆ 6300ರೂ ಕೇಂದ್ರ ಕೊಟ್ಡರೆ 13000 ರೂ ನಾನು ಕೊಟ್ಟಿದ್ದೇನೆ, ನೀರಾವರಿಗೆ ಕೇಂದ್ರ 13000 ರೂ ಕೊಟ್ಟರೆ ನಾನು 25000 ರೂ ಪರಿಹಾರ ಕೊಟ್ಡಿದ್ದೇನೆ. ರೈತರಿಗಾಗಿ ಯಶಸ್ವಿನಿ ಯೋಜನೆ ಮತ್ತೆ ತಂದಿದ್ದೇವೆ. 47 ಲಕ್ಷ ಜನರಿಗೆ ಡೀಸೆಲ್ ಸಬ್ಸಿಡಿ ಕೊಡುತ್ತಿದ್ದೇವೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಎಲ್ಲ ರೈತರಿಗೆ ಬೀಜ ಗೊಬ್ಬರ ಖರೀದಿಗೆ ಜೂನ್ ತಿಂಗಳಲ್ಲಿ10 ಸಾವಿರರೂ ಕೊಡುತ್ತೇನೆ. ರೈತರಿಗೆ 280 ಕೋಟಿ ವೆಚ್ಚದಲ್ಲಿ ಜೀವ ವಿಮೆ ಮಾಡಿಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಾಮಾಜಿಕ ನ್ಯಾಯ ಕೊಟ್ಟಿರುವುದು ನಾವು-ಎಲ್ಲ ವಿದ್ಯಾರ್ಥಿಗಳಿಗೆ ಡಿಗ್ರಿವರೆಗೂ ಉಚಿತ ಶಿಕ್ಷಣ, ವಿದ್ಯಾರ್ಥಿನಿಯರಿಗೆ ಮತ್ತು ದುಡಿಯುವ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಇದು ನಿಮ್ಮ ಬಸವರಾಜ ಬೊಮ್ಮಾಯಿ ಮಾಡಿರುವ ಕೆಲಸ. ಸಾಮಾಜಿಕ ನ್ಯಾಯದ ಭಾಷಣ ಮಾಡುವವರು ಜನರ ಬೇಡಿಕೆ ಈಡೇರಿಸಲಿಲ್ಲ. ಕಾಂಗ್ರೆಸ್ ನವರಿಗೆ ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಾನೆ ಎಂದು ಗೊತ್ತಿರಲಿಲ್ಲ. ನಾನು ಮೀಸಲಾತಿ ನೀಡುವ ಕ್ರಾಂತಿಕಾರಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಇಡೀ ದೇಶದಲ್ಲಿ ಎಲ್ಲ ರಾಜ್ಯಗಳು ಜಾರಿಗೆ ತರಲು ಚಿಂತನೆ ಮಾಡುತ್ತಿವೆ. ನಾನು ಉತ್ತರ ಕರ್ನಾಟಕದವನು, ಗಂಡು ಮಗ ಇದ್ದೀನಿ. ನಾನು ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡು ಆ ಸಮುದಾಯಗಳಿಗೆ ಜೇನು ತುಪ್ಪ ತಿನ್ನಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕರ್ನಾಟಕ ಕೈಗಾರಿಕೆಯಲ್ಲಿ ನಂಬರ್ 1 ಇದೆ-ಕೈಗಾರಿಕೆಯಲ್ಲಿ ಕರ್ನಾಟಕ ನಂಬರ್ ಒನ್ ಇದೆ. ಮಹಿಳೆಯರಿಗೆ ಸ್ತ್ರಿಸಾಮರ್ಥ್ಯ ಯೋಜನೆ ಅಡಿ ಐದು ಲಕ್ಷ ರೂ ಅನುದಾನ, ಸ್ವಾಮಿ ವಿವೇಕಾನಂದ ಯೋಜನೆಯಡಿ ಯುವಕರಿಗೂ ಐದು ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದವರು ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ನಾವು 2013 ರಲ್ಲೇ 10 ಕೆಜಿ ಅಕ್ಕಿ ಕೊಡುತ್ತಿದ್ದೆವು. ಅದನ್ನು 5 ಕೆಜಿ ಗೆ ಇಳಿಸಿದರು. ಕೇಂದ್ರದಿಂದ ಬರುವ 30 ರೂ ಅಕ್ಕಿಗೆ ತಮ್ಮ 3 ರೂ ಚೀಲ ಹಾಕಿ ಅದರ ಮೇಲೆ ತಮ್ಮ ಫೋಟೊ ಹಾಕಿಸಿಕೊಂಡು ಪ್ರಚಾರ ತಗೊಂಡರು. ಮಹಿಳೆಯರಿಗೆ 2000 ರೂ ಮಾಸಾಶನ ನೀಡುವುದಾಗಿ ಹೇಳುತ್ತಾರೆ. ಅವರ ಮಾತನ್ನು ಯಾರೂ ನಂಬುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿ ಬರಬೇಕು-ಶಿಗ್ಗಾಂವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕು. ಶಿಗ್ಗಾಂವಿಯಲ್ಲಿ ಚೆನ್ನಮ್ಮ, ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ನಿರ್ಮಾಣ ಮಾಡಲಾಗುವುದು. ಮತ್ತೊಮ್ಮೆ ಬಿಜೆಪಿ ಬರಬೇಕು.
ಖರ್ಗೆಯವರು ಮೋದಿಗೆ ವಿಷ ಸರ್ಪ ಅಂದರು. ಮೋದಿ ಸಮಾಜದ ವಿಷ ನುಂಗಿ ಆಧುನಿಕ ನೀಲಕಂಠ ಆಗಿದ್ದಾರೆ. ಬಜರಂಗ ದಳ ಬ್ಯಾನ್ ಮಾಡುವುದಾಗಿ ಹೇಳುತ್ತಾರೆ. ಪಿಎಫ್ಐ ಜೊತೆ ಬಜರಂಗ ದಳವನ್ನು ಹೋಲಿಸುತ್ತಾರೆ. ಈಗ ವಿರೋಧ ವ್ಯಕ್ತವಾಗುತ್ತಿದ್ದಂತೆ ತಾವೂ ಹನುಮಂತ ನ ಭಕ್ತರು ಎಂದು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಜೀವನದ ಕೊನೆಯವರೆಗೂ ನಿಮ್ಮ ಸೇವೆ ಮಾಡುತ್ತೇನೆ-ನೀವು ತೋರಿಸಿರುವ ಪ್ರೀತಿ ವಿಶ್ವಾಸ ನಾನು ಎಂದೂ ಮರೆಯುವುದಿಲ್ಲ. ಜೀವನದ ಕೊನೆಯವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಮೋದಿಯವರು ಕೈ ಬಲಪಡಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲು ಅವಕಾಶ ಕಲ್ಪಿಸಿ. ಈ ಬಾರಿ ದಾಖಲೆ ಪ್ರಮಾಣದ ವಿಜಯ ಆಗುತ್ತದೆ ಎನ್ನುವ ವಿಶ್ವಾಸ ಇದೆ. ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಮತ್ತೆ ಕರ್ನಾಟಕಕ್ಕೆ ಮರಳಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.