i
ಜೆಡಿಎಸ್ ಪರ ಅಲೆ ಎದ್ದಿದ್ದು ಗೆಲುವು ನನ್ನದೆ-ಅಭ್ಯರ್ಥಿ ರವೀಂದ್ರಪ್ಪ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಎದ್ದಿದ್ದು ನನ್ನ ಗೆಲುವು ನಿಶ್ಚಿತವಾಗಿದೆ. ರಾಜ್ಯದಲ್ಲಿ ಜನತಾದರ್ಶನ ಮಾಡಿದ ಏಕೈಕ ವ್ಯಕ್ತಿ ಎಚ್ ಡಿ ಕುಮಾರಸ್ವಾಮಿ ಅವರು. ರೈತರ ಬಗ್ಗೆ ಜನ ಸಾಮಾನ್ಯರ ಬಗ್ಗೆ ಜನಪರ ಕಾಳಜಿ ಇರುವಂತಹ ಪ್ರಾದೇಶಿಕ ಪಕ್ಷ ಜೆಡಿಎಸ್ ಎಂದು ಜೆಡಿಎಸ್ ಅಭ್ಯರ್ಥಿ ಎಂ ರವೀಂದ್ರಪ್ಟ ಹೇಳಿದರು.
ತಾಲೂಕಿನ ಮಾರಿಕಣಿವೆ ಕಸಬಾ ಹೋಬಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಮತ ಯಾಚನೆ ಮಾಡಿ ಮಾತನಾಡಿದರು. ಜನ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಎಚ್ ಡಿ ಕುಮಾರಸ್ವಾಮಿ. ಈ ಬಾರಿ ಕರ್ನಾಟಕ ಜನತೆ ಜೆಡಿಎಸ್ ಬೆಂಬಲಿಸುತ್ತಾರೆ. ಜೆಡಿಎಸ್ ಅಭಿಮಾನಿಗಳು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.
ಜಿಲ್ಲಾ ಪ್ರಚಾರ ಸಮಿತಿ ಡಿ ಯಶೋಧರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ ಜಯಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಗೌಡ, ಕಿರಣ್ ಗೌಡ, ಗೌಡ, ಕಿರಣ್, ಕೇಶವ್ ಮೂರ್ತಿ, ನಗರ ಸಭೆ ಸದಸ್ಯ ವೈಪಿಡಿ ದಾದಾಪೀರ್, ಜೆಡಿಎಸ್ ನಗರ ಅಧ್ಯಕ್ಷ ಎಂ ಡಿ ಫಾರಕ್, ಮುಬಾರಕ್, ಎಂಡಿ ರಮೇಶ್, ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.