i
ಜೆಡಿಎಸ್ ದಾಳಿ ಹಿಂದೆ ಬಿಜೆಪಿ ಸಿಎಂ ಮತ್ತು ಅಭ್ಯರ್ಥಿ ಕೈವಾಡ ಖಂಡನೆ- ವಕೀಲ ಗುರುಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಎಂ.ರವೀಂದ್ರಣ್ಣನವರ ಮನೆ ಮೇಲೆ ಐಟಿ ರೈಡ್ ಮಾಡಿ ಪತ್ನಿ ಲತಾ ಮತ್ತು ಸೊಸೆ ಶ್ವೇತಾ ಅವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಜಾತ್ಯತೀತ ಜನತಾ ದಳ ಕಾನೂನು ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ವಕೀಲ ಗುರುಸ್ವಾಮಿ ಎಚ್ ಈಶ್ವರಗೆರೆ ತಿಳಿಸಿದ್ದಾರೆ.
ಆಡಳಿತ ರೂಢ ಬಿಜೆಪಿ ಸರ್ಕಾರ ಮತ್ತು ಶಾಸಕರು ಇಂತಹ ನೀಚ ರಾಜಕೀಯ ಮಾಡಬಾರದು. ಎರಡು ರಾಷ್ಟ್ರೀಯ ಪಕ್ಷಗಳು ನೀಚ ರಾಜಕೀಯಕ್ಕೆ ಇಳಿದಿವೆ. ಒಕ್ಕಲಿಗ ಸಮಾಜವನ್ನೇ ಗುರಿಯಾಗಿಸಿಕೊಂಡು ಎರಡನೇ ಬಾರಿ ಐಟಿ ರೈಡ್ ಮಾಡಿಸುತ್ತಿದ್ದಾರೆ. ಒಕ್ಕಲಿಗ ಸಮಾಜ ಇದನ್ನು ಅರಿತ್ತಾದರೂ ಒಂದಾಗೋಣ ನಮ್ಮ ಅಭ್ಯರ್ಥಿ ರವೀಂದ್ರಣ್ಣನವರನ್ನೇ ಗೆಲ್ಲಿಸೋಣ. ಡಬ್ಬಲ್ ಇಂಜಿನ್ ಬಿಜೆಪಿ (BJP) ಸರ್ಕಾರ ಐಟಿ ಅಧಿಕಾರಿಗಳನ್ನು ತನ್ನ ಗುಲಾಮರನ್ನಾಗಿ ಮಾಡಿಕೊಂಡಿದೆ. ಇಡೀ ರಾಜ್ಯದ ಒಬ್ಬನೇ ಒಬ್ಬ ಬಿಜೆಪಿ ಶಾಸಕ, ಮಂತ್ರಿ, ಮನೆ ಮೇಲೆ ಒಂದೇ ಒಂದು ಐಟಿ ಈಟಿ ದಾಳಿ ಇಲ್ಲ. ಶೇ.40ರಷ್ಟು ಕಮಿಷನ್ ಪಡೆದ ನೀಚ ಸರ್ಕಾರ ಇದ್ದರೂ ಇದು ಮೋದಿ ಕಣ್ಣಿಗೆ ಕಾಣುತ್ತಿಲ್ಲ. ಆದರೆ ಹಿರಿಯೂರಿನ ಪ್ರಜ್ಞಾವಂತ ಮಾತದಾರರು ಈಗಾಗಲೇ ತೀರ್ಮಾನ ಮಾಡಿದ್ದು ಈ ಸಲ ಪ್ರಾದೇಶಿಕ ಪಕ್ಷಕ್ಕೆ ಅದರಲ್ಲೂ ಸರಳ ಸಜ್ಜನ ಅಭ್ಯರ್ಥಿ ಎಂ ರವೀಂದ್ರಪ್ಪ ನವರನ್ನು ಜಯಶೀಲರನ್ನಾಗಿ ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.