i
ರಂಜಿತಾ(22) ಎನ್ನುವ ಯುವತಿ ದುಷ್ಕರ್ಮಿಗಳಿಂದ ಅಪಹರಣ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ದುಷ್ಕರ್ಮಿಗಳು ರಂಜಿತಾ. ಬಿ(22) ಇವರನ್ನು ಶಿವಮೊಗ್ಗದಿಂದ ಮೇ 14ರಂದು ಸಂಜೆ 5ಗಂಟೆಯಿಂದ ರಾತ್ರಿ 9.30ರ ಅವಧಿಯಲ್ಲಿ ಹಣಕ್ಕಾಗಿ ಅಪಹರಣ ಮಾಡಿರುತ್ತಾರೆ.
ಅಪಹರಣಕ್ಕೊಳಗಾದ ರಂಜಿತಾ.ಬಿ ಸುಮಾರು ೫.೧ ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: ೦೮೧೮೨-೨೬೧೪೦೦/೨೬೧೪೧೩/೨೬೧೪೧೬ ನ್ನು ಸಂಪರ್ಕಿಸಬಹುದೆAದು ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದೆ.