i
ಗ್ಯಾರಂಟಿ ಜಾರಿಗೆ ಹಿಂದೇಟು, ಮಾತು ತಪ್ಪುತ್ತಿರುವ ಕಾಂಗ್ರೆಸ್-ಹೆಚ್ಡಿಕೆ ವಾಗ್ದಾಳಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: congress guarantee
ಕಾಂಗ್ರೆಸ್ ಮುಖಂಡರು ತಮ್ಮ ಚುನಾವಣಾ ಭಾಷಣವನ್ನು ಮತ್ತೊಮ್ಮೆ ಕೇಳಿಸಿಕೊಳ್ಳಲಿ, ನನಗೂ, ನಿಮಗೂ, ಎಲ್ಲರಿಗೂ 200 ಯೂನಿಟ್ ಉಚಿತ ಕರೆಂಟ್ ಕಣಯ್ಯ ಎಂದೇಳುತ್ತಿದ್ದ ನಾಯಕರೀಗ ಇಲ್ಲದ ಶರತ್ತುಗಳನ್ನು ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದು ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನವರು ಚುನಾವಣೆ ವೇಳೆ ನಮಗೂ ನಿಮಗೂ ಎಲ್ಲರಿಗೂ ಫ್ರೀ ಫ್ರೀ ಅಂತಾ ಹೇಳಿದ್ರು.ಈಗ ಗೈಡ್ ಲೈನ್ ಮಾಡ್ತೀವಿ ಅಂತಿದ್ದಾರೆ. ಗ್ಯಾರಂಟಿ ಯೋಜನೆಗಳು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರು ಭಾಷಣಗಳಲ್ಲಿ ಎದ್ದೇಳು ಕರ್ನಾಟಕ ಎಂದು ಹೇಳುತ್ತಿದ್ದರು. ಈಗ ಕರ್ನಾಟಕದ ಜನರನ್ನ ಎದ್ದೇಳಿಸಿ ಕರೆಂಟ್ ಬಿಲ್ ಕಟ್ಟಬೇಡಿ ಅಂತ ನಾವು ಕರೆ ಕೊಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.