i
ಕರೆಂಟ್ ಬಿಲ್ ಕಟ್ಟಬೇಡಿ, ಬಸ್ ಚಾರ್ಜ್ ಕೊಡಬೇಡಿ….
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಸುಳ್ಳು 5 ಗ್ಯಾರಂಟಿ ಕಾರ್ಡ್ ನೀಡಿದೆ. ಆದರೆ ಅನುಷ್ಠಾನ ಮಾಡಲು ಮೀನಾವೇಷ ಎಣಿಸುತ್ತಿದೆ. ಆದ್ದರಿಂದ ಮತದಾರರ್ಯಾರು ಕರೆಂಟ್ ಬಿಲ್ ಕಟ್ಟಬೇಡಿ, ಬಸ್ ಚಾರ್ಜ್ ಕೊಡಬೇಡಿ, ಕೊಟ್ಟ ಮಾತನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ನೀವು ಸೇರಿದಂತೆ ಯಾರೊಬ್ಬರೊಬ್ಬರು 200 ಯೂನಿಟ್ ವಿದ್ಯುತ್ ಗೆ ಬಿಲ್ ಕಟ್ಟಬೇಕಿಲ್ಲ ಎಂದು ಉದ್ದುದ್ದ ಭಾಷಣ ಮಾಡಿದ ನಾಯಕರು ಈಗ ಇಲ್ಲದ ನಿಬಂಧನೆಗಳನ್ನು ಮತದಾರರ ಮೇಲೆ ಹೇರಿ ಗ್ಯಾರಂಟಿ ಜಾರಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣ ಉಚಿತ ಎಂದು ಹೇಳಿ ಈವರೆಗೆ ಜಾರಿ ಮಾಡದೆ ಇರುವುದಕ್ಕೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೆಂಡ ಕಾರಿ ಜನರಿಗೆ ವಿದ್ಯುತ್ ಬಿಲ್ ಕಟ್ಟಬೇಡಿ ಹಾಗೂ ಮಹಿಳೆಯರು ಟಿಕೆಟ್ ಪಡೆಯುವುದಕ್ಕೆ ಹಣ ನೀಡಬೇಡಿ ಎಂದು ಕರೆ ಕೊಟ್ಟಿದ್ದಾರೆ.
ವಿದ್ಯುತ್ ಉಚಿತವಾಗಿ ನೀಡಲು 24 ಸಾವಿರ ಕೋಟಿ ಬೇಕು ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ವಿಷಯದಲ್ಲಿ ನಿಜಕ್ಕೂ ಬೀದಿಗಿಳಿಯುತ್ತೇವೆ. ನನ್ನ ಪಕ್ಷ ಮುಂದಿನ 5 ವರ್ಷ ವಿಷಯಾಧಾರಿತ ಹೋರಾಟ ಮಾಡ್ತೀವಿ. ಹಣದ ಬಲದಿಂದ ಚುನಾವಣಾ ಆಗದಂತೆ ಬದಲಾವಣೆ ತರ್ತೀವಿ. ಮತದಾರರಿಗೆ ಮನವಿ ಮಾಡ್ತೀವಿ, ದುಡ್ಡು ಕೊಟ್ಡ ಮೇಲೆ ಓಟು ಹಾಕ್ತೀವಿ ಅನ್ನೋ ಜನರಿದ್ದಾರೆ. ಒಪ್ಪತ್ತಿನ ಕೂಳಿಗೆ, ಬದುಕನ್ನು ಹಾಳು ಮಾಡಿಕೊಳ್ತಿದ್ದೀರಾ. ಜನರು ಈ ಬಗ್ಗೆ ಯೋಚನೆ ಮಾಡಬೇಕಿದೆ. 5 ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡೋಕೆ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.