i
ತೊಡರನಾಳ್ ಬಿ.ಸುಧಾಕರ್ ಇನ್ನಿಲ್ಲ, ಇಂದು 4 ಗಂಟೆಗೆ ಅಂತ್ಯಕ್ರಿಯೆ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ತೊಡರನಾಳ್ ಗ್ರಾಮದ ಬಿ. ಸುಧಾಕರ್ (67) ಅವರು ಭಾನುವಾರ ನಿಧನವಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎಂದು ಬಿ.ಸುದಕರ್ ಸಹೋದರ ಮಹೇಶ್ವರಪ್ಪ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಇದೇ ದಿನ 4 ಗಂಟೆ ವೇಳೆಗೆ ಮೃತರ ಜಮೀನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.