i
ಬೆಂಗಳೂರು:
ಪ್ರಸ್ತುತ ನವೀನ ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ ಕಿರು ಉದ್ಯಮಿಗಳ ಪಾತ್ರ ಪ್ರಮುಖವಾದುದ್ದು ಮತ್ತು ನವೀನ ಬೇಕರಿ ಪದಾರ್ಥಗಳ ಮಾರಟವೂ ಒಂದು ಪ್ರಚಲಿತ ಉದ್ದಿಮೆಯಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ.ಸುರೇಶ ತಿಳಿಸಿದರು.
ಕೃಷಿ ನಾವಿನ್ಯತೆ ಕೇಂದ್ರ ಮತ್ತು ಬೇಕರಿ ಮೌಲ್ಯವಧರ್ನೆ ವಿಭಾಗ ಸಹಯೋಗದೊಂದಿಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ “ನವೀನ ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ ಸಣ್ಣ ಉದ್ಯಮಿಗಳ ಪ್ರಮುಖ ಪಾತ್ರ” ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನವೀನ ಬೇಕರಿ ಪದಾರ್ಥಗಳ ಬೇಡಿಕೆ ಹೆಚ್ಚಾಗಿದ್ದು, ಎಲ್ಲಾ ನಾಗರಿಕರ ಗಮನ ಆಕರ್ಷಿಸುತ್ತಿವೆ ಮತ್ತು ನವೀನ ಬೇಕರಿ ಪದಾರ್ಥಗಳಿಂದ ಸಣ್ಣ ಉದ್ಯಮಿಗಳು ಹೆಚ್ಚು ಆದಾಯ ಗಳಿಸುತ್ತಿದ್ದಾರೆ, ಹೀಗಾಗಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಬೇಕರಿ ಮತ್ತು ಮೌಲ್ಯವರ್ಧನೆ ವಿಭಾಗದಲ್ಲಿ ನಿರಂತರವಾಗಿ ಗೃಹಿಣಿಯರಿಗೆ ಮತ್ತು ಯುವ ಉದ್ಯಮಿಗಳಿಗೆ ಒತ್ತು ನೀಡಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕೃಷಿ ವಿಶ್ವವಿದ್ಯಾನಿಲಯದ ಡೀನ್ (ಸ್ನಾತಕೋತ್ತರ) ಡಾ. ಎಚ್. ಸಿ. ಪ್ರಕಾಶ್ರವರು ಮಾತನಾಡಿ, ಬೇಕರಿ ಪದಾರ್ಥಗಳ ತಯಾರಿಕೆಗೆ ಸರ್ಕಾರದಲ್ಲಿ ಸಣ್ಣ ಉದ್ಯಮಿಗಳಿಗೆ ದೊರೆಯುವ ಸೌಲಭ್ಯಗಳನ್ನು ಕುರಿತು ವಿವರಿಸಿದರು ಹಾಗೂ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ವಿವರವಾದ ಮಾಹಿತಿ ನೀಡಿದರು.
ಕೃಷಿ ವಿಸ್ತರಣಾ ನಿರ್ದೆಶನಾಲಯದ ಮುಖ್ಯಸ್ಥರಾದ ಡಾ. ವಿ. ಎಲ್. ಮಧುಪ್ರಸಾದ್ರವರು ಮಾತನಾಡಿ, ಆರೋಗ್ಯದ ಮಹತ್ವವನ್ನು ಮನಗಂಡು ಸಾರ್ವಜನಿಕರು ಕಡಿಮೆ ಖರ್ಚಿನ ಉತ್ಕøಷ್ಟ ಬೇಕರಿ ಪದಾರ್ಥಗಳನ್ನು ಖರೀದಿಸಿ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ನೀಡಬೇಕೆಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸವಿತಾ ಎಸ್. ಮಂಗಾನವರ ಪ್ರಾಧ್ಯಾಪಕರು ಮತ್ತು ಸಂಯೋಜಕರು, ಬೇಕರಿ ಮತ್ತು ಮೌಲ್ಯವರ್ಧನೆ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ, ಬೆಂಗಳೂರುರವರು “ಬೇಕರಿ ಉದ್ಯಮದಲ್ಲಿ ಅವಕಾಶಗಳು ಮತ್ತು ಸವಾಲುಗಳು” ಎಂಬ ವಿಷಯವನ್ನು ಮಂಡಿಸಿದರು, ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಧುಸ್ಮಿತಾ ಸಾಹೂ ಮುಖ್ಯಸ್ಥರು, ಆಹಾರ ನಿಯಂತ್ರಣ ವ್ಯವಹಾರ, ಬೆಂಗಳೂರಿನ ಎಂಟಿಆರ್ ಫುಡ್ಸ್ ಪ್ರೈ ಲಿಮಿಟೆಡ್ರವರು “ನವೀನ ಬೇಕರಿ ಪದಾರ್ಥಗಳ ಉತ್ಪಾದನೆ ಮತ್ತು ಮಾರುಕಟ್ಟೆಗೆ ಬಿಡುಗಡೆಯ ನಂತರದ ಹಂತದವರೆಗೆ ಉತ್ಪನ್ನಗಳ ನಾವಿನ್ಯತೆ ಹಾಗೂ ಮಾರಾಟಕ್ಕಾಗಿ ಅನುಸರಣೆಯ ನಿಯಮಗಳು” ಕುರಿತು ವಿಷಯ ಮಂಡಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಬೇಕರಿ ಮತ್ತು ಮೌಲ್ಯವರ್ಧನೆ ವಿಭಾಗದಿಂದ ತರಬೇತಿ ಪಡೆದಿರುವ ಉದ್ಯಮಿದಾರರು “ಬೇಕರ್ಸ್ ಜಂಕ್ಷನ್” “ಮೆಗಾಲೊಸ್” ಹಾಗೂ “ವೇದಾಮೃತ ಸಿರಿ” ಎಂಬ ಬ್ರಾಂಡನಲ್ಲಿ ಬೇಕರಿ ಪದಾರ್ಥಗಳು ಮತ್ತು ಸಣ್ಣ ಯಂತ್ರೋಪಕರಣಗಳನ್ನು ಪ್ರದರ್ಶಿಸಿ ಕಾರ್ಯಾಗಾರದಲ್ಲಿ ಭಾಗವಹಿಸಿದವರ ಗಮನ ಸೆಳೆದರು ಮತ್ತು ಆಡಳಿತಾಧಿಕಾರಿಗಳಾದ ಡಾ.ಕೆ.ಎಂ.ಹರೀಣಿಕುಮಾರ್, ಡಾ.ವೀಣಾ. ಎಸ್.ಅನಿಲ್. ಪ್ರಾಧ್ಯಾಪಕರು ಮತ್ತು ಸಂಯೋಜಕರು (ಕೃಷಿ ನಾವಿನ್ಯತೆ ಕೇಂದ್ರ), ಪ್ರಾಧ್ಯಾಪಕರಾದ ಶ್ಯಾಮಲಮ್ಮ, ಬೋರಯ್ಯ. ಕಲ್ಪನ, ಅಶ್ವಿನಿ, ಪ್ರಕೃತಿ ಮತ್ತು ಲಕ್ಷೀಶ್ಮತ್ತಿತರರು ಉಪಸ್ಥಿತರಿದ್ದರು.