i
ಸಿಇಟಿ, ನೀಟ್, ಜೆಇಇ ಬಗ್ಗೆ ಉಚಿತ ಕೌನ್ಸ್ಲಿಂಗ್ ಸಭೆ ಜೂನ್ 9 ಮತ್ತು 10ರಂದು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆಯ ವತಿಯಿಂದ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಬಗ್ಗೆ ಉಚಿತ ಕೌನ್ಸ್ಲಿಂಗ್ ಸಭೆಯನ್ನು ಇದೇ ಜೂನ್ 9ರಂದು ಹೊಸದುರ್ಗದ ಜ್ಯೋತಿ ಟಾಕೀಸ್ ಹಿಂಭಾಗದ ವಿಜಯನಗರ ಬಡಾವಣೆಯ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಹಾಗೂ ಜೂನ್ 10ರಂದು ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಏರ್ಪಡಿಸಲಾಗಿದೆ.
ಸಭೆಯಲ್ಲಿ ಸಂಪನ್ಮೂಲ ವ್ಯಕಿಗಳು ನೀಟ್, ಕೆ-ಸಿಇಟಿಗೆ ಅರ್ಹತೆ ಕಟಾಯಿಸಿದ ಅಂಕಗಳು, ರಾಜ್ಯ ಮತ್ತು ರಾಷ್ಟ್ರಮಟ್ಟದ ಮೀಸಲಾತಿ ಪ್ರಮಾಣಗಳು, ವಿವಿಧ ಕೋರ್ಸ್ಗಳ ಆಯ್ಕೆ, ಉತ್ತಮ ಕಾಲೇಜುಗಳ ಆಯ್ಕೆ, ಆನ್ಲೈನ್ ಮೂಲಕ ದಾಖಲಾತಿ ಪ್ರವೇಶ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುತ್ತಾರೆ.
ಈ ಕಾರ್ಯಕ್ರಮವನ್ನು ಕಳೆದ 15 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಸಿಇಟಿ, ನೀಟ್, ಜೆಇಇ ಗೆ ಕೋಚಿಂಗ್ ನೀಡುತ್ತಿರುವ ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆ ಇವರು ವಿದ್ಯಾರ್ಥಿ, ಪೋಷಕರ ಉಪಯೋಗಕ್ಕಾಗಿ ಆಯೋಜಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು, ಪೋಷಕರೊಂದಿಗೆ ಆಗಮಿಸಿ, ಇದರ ಸದುಪಯೋಗ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ್ ಅವರ ದೂರವಾಣಿ ಸಂಖ್ಯೆ 9742660497 ಗೆ ಸಂಪರ್ಕಿಸಬಹುದು ಎಂದು ಎಕ್ಸೆಲ್ ಅಕಾಡೆಮಿ ನಿರ್ದೇಶಕ ಬಿ.ಕೆ.ಕುಮಾರ್ ತಿಳಿಸಿದ್ದಾರೆ.