i
ಎಟಿಎನ್ಸಿಸಿ ಕಾಲೇಜಿಗೆ 10 ರ್ಯಾಂಕ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕಳೆದ ಸೆಪ್ಟೆಂಬರ್ ೨೦೨೩ರಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಬಿ.ಕಾಂ. ಮತ್ತು ಬಿ.ಬಿ.ಎ. ಪರೀಕ್ಷೆಯಲ್ಲಿ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಒಟ್ಟು ೧೦ ವಿದ್ಯಾರ್ಥಿಗಳು ವಿವಿಧ ರ್ಯಾಂಕ್ ಗಳಿಸಿದ್ದಾರೆ.
ಬಿ.ಕಾಂ. ವಿಭಾಗದಲ್ಲಿ ಕು. ಹರ್ಷಿತಾ ಜಿ. ೧ನೇ ರ್ಯಾಂಕ್, ಕು. ಪೂರ್ಣಿಮಾ ಎಸ್, ೨ನೇ ರ್ಯಾಂಕ್, ಕು. ಸುಚಿತ್ರ್ರಾ ಹೆಚ್, ೫ನೇ, ಮೌರಾಸೆಸ್ ವಿ. ೬ನೇ, ಶಿಜಾನ್ ನಾಜಿರಾ ೭ನೇ, ಬಿ ಬಿ ಆಯಿಷಾ ೮ನೇ ರ್ಯಾಂಕ್ ಗಳಿಸಿದ್ದಾರೆ.ಬಿ.ಬಿ.ಎ. ವಿಭಾಗದಲ್ಲಿ ಕು. ಏಕ್ತಾ ಜೈನ್, ೫ನೇ , . ಫೌಜಿಯಾ ೬ನೇ , . ಚಿರಾಗ್ ಜೈನ್, ೭ನೇ, ಶ್ರೇಯಾ ಎಸ್. ಹೆಚ್. ೧೦ನೇ ರ್ಯಾಂಕ್ ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರರ ಪರವಾಗಿ ಪ್ರಾಂಶುಪಾಲರಾದ ಪ್ರೊ, ಮಮತಾ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಾಲೇಜಿಗೆ ಸತತ ೩ನೇ ಬಾರಿಗೆ ಬಿ.ಕಾಂ.ನಲ್ಲಿ ಪ್ರಥಮ ರ್ಯಾಂಕ್ ಗಳಿಸುವುದೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ.