i
ದೇವರು ನೀಡಿದ ಈ ಜೀವ ಉಳಿಸಿಕೊಳ್ಳುವುದು ನಮ್ಮ ಕೈಯಲಿದೆ:ಸಿಪಿಐ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ : ಪೂರ್ವ ಸಂಚಾರ ಪೋಲಿಸ್ ಠಾಣೆ, ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಸಯುಂಕ್ತಾಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ರಾಷ್ಟ್ರೀಯ ಸಪ್ತಾಹದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರದರ್ಶನ ಮತ್ತುಜಾಗೃತಿ ಕಾರ್ಯಕ್ರಮವನ್ನು ಹಮ್ಮೀಕೊಳ್ಳಲಾಗಿತ್ತು. ಜೀವನದಲ್ಲಿ ಶಿಸ್ತು ಅತಿ ಮುಖ್ಯ ಆ ಶಿಸ್ತನ್ನೆ ಬಂಡವಾಳ ಮಾಡಿಕೊಂಡು ನಮ್ಮ ಜೀವನವನ್ನು ನಾವು ಸಾಗಿಸಬೇಕು ರಸ್ತೆಯಲ್ಲಿ ಓಡಾಡುವಾಗ ಸಂಚಾರ ನಿಯಮವನ್ನು ಪಾಲಿಸಿಕೊಂಡು ಅದಕ್ಕೆ ತಕ್ಕಂತೆ ನಾವು ಸ್ಪಂದಿಸಿದರೆ ದೆವರು ನೀಡಿದಂತಹ ಈ ಜೀವವು ಉಳಿಸಿಕೊಳ್ಳುವುದು ನಮ್ಮ ಕೈಯಲಿದೆ ಅದನ್ನು ಕಾಪಾಡಿಕೊಂಡು ಹೋಗಬೇಕಾದರೆ ನಿಯಮವನ್ನು ಪಾಲಿಸಲೆಬೇಕು, ನಿಯಮ ಪಾಲನೆಯಲ್ಲಿ ಅಲಕ್ಷ ತೋರಿದಲ್ಲಿ ಅನಾಹುತಗಳು ಗ್ಯಾರಂಟಿ ಈ ಅನಾಹುತಗಳನ್ನು ತಪ್ಪಿಸಬೇಕಾದರೆ ಸಂಚಾರ ನಿಯಮ ಪಾಲನೆ ಅತ್ಯಗತ್ಯ ಎಂದು ಶಿವಮೊಗ್ಗ ಸಂಚಾರ ವೃತ್ತದ ಸರ್ಕಲ್ ಪೋಲಿಸ್ ಇನ್ಸಪೆಕ್ಟರ್ ಸಂತೋಷ ಕುಮಾರ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಂಚಾರ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಮೌನೆಶ ರವರು ಕೈ ಮುಖಾಂತರ ಪ್ರದರ್ಶನ ಮಾಡಿ ವಿವರಣೆ ಮಾಡುತ್ತಾ ತೋರಿಸಿದರು. ಶ್ರೀನಿವಾಸ ರವರು ಪಿ.ಪಿ.ಟಿ ಮೂಲಕ ನಾವು ನಿಯಮವನ್ನು ಹೇಗೆ ಪಾಲಿಸಬೇಕೆಂದು, ಪಾಲಿಸದೆ ಇದ್ದಲಿ ಆಗುವ ಅಪಘಾತದ ಬಗ್ಗೆ ಭಾವಚಿತ್ರಗಳ ತುಣುಕುಗಳನ್ನು ತೋರಿಸಿ ವಿವರಿಸಿ ನಾವು ಮಾಡಬೇಕಾಗುವ ಪಾಲನೆ ಬಗ್ಗೆ ಹಾಗೂ ವರ್ಷದಲ್ಲಿ ಆಗುವ ಅನಾಹುತಗಳ ಬಗ್ಗೆ ತಿಳಿಸಿಕೊಟ್ಟರು.ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ಸ್ವಾಗತಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ ನಿರ್ವಹಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಪೂರ್ವ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ನವೀನಕುಮಾರ, ಶಿವಣ್ಣನವರ, ಪಶ್ಚಿಮ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ತಿರುಮಲೇಶ, ಭಾರತಿ, ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಹಿರಿಯ ಸ್ಕೌಟರ್ ಕೃಷ್ಣಸ್ವಾಮಿ, ದಾಕ್ಷಾಯಿನಿ, ಅಣ್ಣಪ್ಪ ಒಂಟಿಮಾಳಗಿ, ಚಂದ್ರಶೇಖರಯ್ಯ, ಉಪನ್ಯಾಸಕಿಯರಾದ ಭಾರತಿ, ಅನ್ನಪೂರ್ಣ ನಗರ ಶಾಲೆಯ ೨೦೦ಕ್ಕೂ ಹೆಚ್ಚು ಸ್ಕೌಟ್ಸ್, ಗೈಡ್ಸ್, ರೋರ್ಸ್, ರೇಂರ್ಸ್ ಗಳು ಉಪಸ್ಥಿತರಿದ್ದರು.