i
ಜೀತದಾಳುಗಳಾಗಿದ್ದ ಕೂಲಿ ಕಾರ್ಮಿಕರು ಬಂಧಮುಕ್ತ…
ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ:
ಜೀತದಾಳುಗಳಂತೆ ೧೯ ಮಂದಿ ಬಯಲುಸೀಮೆಯ ಕೃಷಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಪ್ರಕರಣವೊಂದು ತಾಲೂಕಿನ ಗುತ್ತಿ ಯಡೇಹಳ್ಳಿ ಗ್ರಾಮದಲ್ಲಿ ವರದಿಯಾಗಿದ್ದು ಸ್ಥಳಕ್ಕೆ ಉಪವಿಭಾಗಾಧಿಕಾರಿ ಸತ್ಯನಾರಾಯಣ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಹೊರ ಊರುಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಮೂಲ ಸೌಕರ್ಯಗಳನ್ನು ನೀಡದೆ ಶೋಷಣೆ ನಡೆಸುತ್ತಿದ್ದ ಮೇಸ್ತಿç ಕರಿಯಪ್ಪ ಎಂಬಾತನನ್ನು ಮಾಳೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನೆಡೆಸಿದ್ದಾರೆ.
ಜೀತದಾಳುಗಳಂತೆ ಕಾರ್ಯ ನಿರ್ವಹಿಸಿದ ೧೯ ಮಂದಿ ಕೂಲಿ ಕಾರ್ಮಿಕರಿಗೆ ನೀಡಬೇಕಾದ ಮೂರು ಲಕ್ಷ ಸಂಬಳ ಹಾಗೂ ಅವರು ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ಮೇಸ್ತಿçಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ಉಪವಿಭಾಗಾಧಿಕಾರಿ ಸೂಚನೆ ನೀಡಿದ್ದಾರೆ.
ತಹಶೀಲ್ದಾರ್ ಜಕ್ಕಣ್ಣನವರ್,ಡಿವೈಎಸ್ಪಿ ಗಜಾನನ ವಾಮನ ಸುತಾರ,ಮಾಳೂರು ಠಾಣೆಯ ಪಿಎಸ್ಐ ಸಿದ್ಧಪ್ಪ,ಕಾರ್ಮಿಕ ಇಲಾಖೆಯ ನಿರೀಕ್ಷಕಿ ಸುಖಿತಾ ಉಪಸ್ಥಿತರಿದ್ದರು.