i
ಶುಚಿ ಮತ್ತು ವಿಶೇಷ ಶೈಲಿಯ ರುಚಿಯ ಹೋಳಿಗೆ ಗೌರಮ್ಮಇನ್ನೂ ನೆನಪು ಮಾತ್ರ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಲೆನಾಡಿನ ನಮ್ಮ ಹೆಮ್ಮೆಯ ಗೌರಮ್ಮ ಅವರು ತಮ್ಮ ಶುಚಿಯಾದ ಹಾಗೂ ತಮ್ಮದೇ ವಿಶೇಷ ಶೈಲಿಯ ರುಚಿಯ ಮೂಲಕ ಹೋಳಿಗೆ ತಯಾರಿಸಿ ಜಿಲ್ಲೆ ಸೇರಿದಂತೆ ದೇಶ ವಿದೇಶಗಳಲ್ಲಿ ಉತ್ತಮ ಹೆಸರು ಗಳಿಸಿ ಹೋಳಿಗೆ ಗೌರಮ್ಮ ಎಂದೇ ಖ್ಯಾತರಾದ ಇವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿರುವ ಸುದ್ದಿ ತಿಳಿದು ದುಃಖ ಉಂಟಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ.
ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ಇವರು ಕಡುಬಡತನದಲ್ಲಿ ಜೀವನ ಸಾಗಿಸುತ್ತಾ ಬದುಕು ಕಟ್ಟಿಕೊಂಡವರು. ಇದರೊಂದಿಗೆ ಹತ್ತಾರು ಜನರಿಗೆ ಉದ್ಯೋಗ ನೀಡಿ ಬದುಕು ಸಾಗಿಸಲು ಬೆನ್ನೆಲುಬಾಗಿ ನಿಂತವರು. ಕಳೆದ 50 ವರ್ಷಗಳಿಂದ ವಿವಿಧ ಬಗೆಯ ಹೋಳಿಗೆಗಳನ್ನು ತಯಾರಿಸಿಕೊಂಡು ಹೋಳಿಗೆ ಪ್ರಿಯರ ಅಚ್ಚುಮೆಚ್ಚಿನ ಹೋಳಿಗೆ ಗೌರಮ್ಮ ಆಗಿ ಶಿವಮೊಗ್ಗದ ಹೆಸರನ್ನು ದೇಶ ವಿದೇಶಗಳಲ್ಲಿ ಪರಿಚಯಿಸಿದವರು.