Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ದಸರಾ ಹಬ್ಬ – ನಮ್ಮ ಸಂಸ್ಕೃತಿಯ ವೈಭವ

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ದಸರಾ ಹಬ್ಬ
ನಮ್ಮ ಸಂಸ್ಕೃತಿಯ ವೈಭವ...

ಭಾರತೀಯ ಸಂಸ್ಕೃತಿಯ ಆಭರಣವೆಂದರೆ ಹಬ್ಬಗಳು. ಪ್ರತಿಯೊಂದು ಹಬ್ಬವು ತನ್ನದೇ ಆದ ಇತಿಹಾಸ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಹೊತ್ತಿದೆ. ಅಂತಹ ಅನನ್ಯ ಹಬ್ಬಗಳಲ್ಲಿ ಪ್ರಮುಖವಾದದ್ದು ದಸರಾ ಹಬ್ಬ. ನವರಾತ್ರಿ ಎಂದೂ ಕರೆಯಲ್ಪಡುವ ದಸರಾ, ಭಕ್ತಿ, ಶಕ್ತಿ, ಜ್ಞಾನ, ಧೈರ್ಯ ಹಾಗೂ ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ಪ್ರತಿವರ್ಷ ಆಶ್ವಯುಜ ಮಾಸದಲ್ಲಿ ಆಚರಿಸುವ ಈ ಹಬ್ಬವು ದುರ್ಗಾದೇವಿಯ ಶಕ್ತಿ ಆರಾಧನೆಯಿಂದ ಆರಂಭಿಸಿ, ಅಶಕ್ತಿಯ ಮೇಲೆ ಶಕ್ತಿಯ ವಿಜಯದ ಸಂದೇಶವನ್ನು ನೀಡುತ್ತದೆ.

ದಸರಾ ಹಬ್ಬದ ಪೌರಾಣಿಕ ಹಿನ್ನೆಲೆ-
ದಸರಾ ಹಬ್ಬದ ಮೂಲ ಪೌರಾಣಿಕ ಕಥೆಗಳು ಬಹಳ ವೈವಿಧ್ಯಮಯವಾಗಿವೆ. ಪುರಾಣಗಳ ಪ್ರಕಾರ ಮಹಿಷಾಸುರನನ್ನು ಸಂಹರಿಸಲು ದೇವತೆಗಳ ಶಕ್ತಿಯ ಸಮಾಗಮದಿಂದ ದುರ್ಗಾದೇವಿಯು ಅವತರಿಸಿ ಒಂಬತ್ತು ದಿನಗಳ ಕಾಲ ಯುದ್ಧವಾಡಿ ದಶಮಿಯಂದು ಮಹಿಷಾಸುರನನ್ನು ಸಂಹರಿಸಿದಳು. ಇದರಿಂದಾಗಿ ಈ ದಿನವನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ ಶ್ರೀರಾಮನು ರಾವಣನನ್ನು ಸಂಹರಿಸಿದ ದಿನವೇ ವಿಜಯದಶಮಿ. ಹೀಗಾಗಿ ದಸರಾ ಹಬ್ಬವು ಅಸತ್ಯದ ಮೇಲೆ ಸತ್ಯದ ವಿಜಯ
, ಅನ್ಯಾಯದ ಮೇಲೆ ನ್ಯಾಯದ ವಿಜಯವನ್ನು ಪ್ರತಿಪಾದಿಸುತ್ತದೆ.

ನವರಾತ್ರಿಯ ಆಚರಣೆ-
ದಸರಾ ಹಬ್ಬವು ಒಂಬತ್ತು ದಿನಗಳ ನವರಾತ್ರಿಯಿಂದ ಆರಂಭವಾಗುತ್ತದೆ. ಪ್ರತಿ ದಿನವೂ ದೇವಿಯ ವಿಭಿನ್ನ ರೂಪಗಳನ್ನು ಆರಾಧಿಸಲಾಗುತ್ತದೆ. ಮೊದಲ ಮೂರು ದಿನ ದುರ್ಗೆಯನ್ನು
, ಮುಂದಿನ ಮೂರು ದಿನ ಲಕ್ಷ್ಮಿಯನ್ನು ಹಾಗೂ ಕೊನೆಯ ಮೂರು ದಿನ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಈ ಪ್ರಕಾರ ದುರ್ಗಾ ಶಕ್ತಿ, ಲಕ್ಷ್ಮಿ ಸಂಪತ್ತು ಹಾಗೂ ಸರಸ್ವತಿ ಜ್ಞಾನವನ್ನು ನೀಡುವ ದೇವತೆಗಳೆಂದು ಭಕ್ತರು ನಂಬುತ್ತಾರೆ. ನವರಾತ್ರಿಯ ಸಮಯದಲ್ಲಿ ಮನೆಗಳಲ್ಲಿ, ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀಪ, ಹೂವು, ಕೊಲುವಿನ ಅಲಂಕಾರ, ಭಜನೆ-ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಮೈಸೂರು ದಸರಾ ನಾಡಹಬ್ಬ-
ಕರ್ನಾಟಕದಲ್ಲಿ ದಸರಾ ಹಬ್ಬವನ್ನು ನಾಡಹಬ್ಬವೆಂದು ಗೌರವದಿಂದ ಕರೆಯಲಾಗುತ್ತದೆ. ವಿಶೇಷವಾಗಿ ಮೈಸೂರಿನ ದಸರಾ ಜಗತ್ತಿನ ಪ್ರಸಿದ್ಧಿ ಪಡೆದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದ ಆರಂಭವಾದ ಮೈಸೂರು ದಸರಾ
, ಒಡೆಯರ್ ವಂಶದ ಕಾಲದಲ್ಲಿ ಮತ್ತಷ್ಟು ವೈಭವ ಪಡೆದಿತು. ಮೈಸೂರಿನ ಅಂಬಾರಿಯಲ್ಲಿ ದಸರಾ ಹಬ್ಬದ ದಿನ ಅಂಬಾರಿ ಹೂದ ಆನೆಯ ಮೇಲಿನ ಚಿನ್ನದ ಹೌದದಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಜಂಬೂ ಸವಾರಿ ನಡೆಸುವುದು ಪ್ರಮುಖ ಆಕರ್ಷಣೆ. ಸಾವಿರಾರು ಜನರು, ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಈ ಜಂಬೂಸವಾರಿಯನ್ನು ನೋಡುವುದಕ್ಕೆ ಜಮಾಯಿಸುತ್ತಾರೆ. ಅರಮನೆ ಬೆಳಗುವ ಕ್ಷಣಗಳು, ಸಾಂಸ್ಕೃತಿಕ ಉತ್ಸವಗಳು, ಯುದ್ಧಕಲೆ ಪ್ರದರ್ಶನಗಳು ದಸರಾ ಹಬ್ಬಕ್ಕೆ ಅತೀವ ಕಳೆ ನೀಡುತ್ತವೆ.

ಗ್ರಾಮೀಣ ದಸರಾ ಆಚರಣೆ-
ನಗರಗಳಲ್ಲಿ ಮಾತ್ರವಲ್ಲ
, ಗ್ರಾಮೀಣ ಪ್ರದೇಶಗಳಲ್ಲಿಯೂ ದಸರಾ ಹಬ್ಬವು ಮಹತ್ವ ಪಡೆದಿದೆ. ಹಳ್ಳಿ-ಹಳ್ಳಿಗಳಲ್ಲಿ ದಸರಾ ಹಬ್ಬದ ಸಮಯದಲ್ಲಿ ಜಾತ್ರೆಗಳು, ಹಬ್ಬ-ಹರಿದಿನಗಳು ನಡೆಯುತ್ತವೆ. ಹಳ್ಳಿಯ ದೇವರ ಕಾರಂಜಿಗಳು, ಹೂವಿನ ಅಲಂಕಾರಗಳು, ಭಜನೆ, ನಾಟಕ-ಯಕ್ಷಗಾನ ಪ್ರದರ್ಶನಗಳು ಹಬ್ಬದ ವೈಭವವನ್ನು ಹೆಚ್ಚಿಸುತ್ತವೆ. ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಗಳಿಗೆ ಪೂಜೆ ಸಲ್ಲಿಸಿ ಸಮೃದ್ಧಿ ಕೋರುತ್ತಾರೆ.

ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು-
ದಸರಾ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಸಾಮಾಜಿಕ ಏಕತೆಯ ಹಬ್ಬ. ಎಲ್ಲ ವರ್ಗದ ಜನರು
, ಧಾರ್ಮಿಕ ಭೇದವಿಲ್ಲದೆ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಮಹಿಳೆಯರು ಹೂವಿನ ಅಲಂಕಾರ, ಕೊಲುವಿನ ಬೊಂಬೆಗಳ ಪ್ರದರ್ಶನ ನಡೆಸುವ ಮೂಲಕ ತಮ್ಮ ಕಲಾತ್ಮಕ ಪ್ರತಿಭೆಯನ್ನು ತೋರಿಸುತ್ತಾರೆ. ಮಕ್ಕಳಿಗೆ ಕಥೆಗಳು, ನಾಟಕಗಳು, ಪಾಠಗಳು ಮೂಲಕ ಸಾಂಸ್ಕೃತಿಕ ಶಿಕ್ಷಣ ಸಿಗುತ್ತದೆ. ದಸರಾ ಹಬ್ಬವು ಸಂಸ್ಕೃತಿ, ಕಲೆ ಹಾಗೂ ಜ್ಞಾನವನ್ನು ಬೆಳಸುವ ವೇದಿಕೆಯಾಗಿದೆ.

ನೈತಿಕ ಮೌಲ್ಯಗಳು-
ದಸರಾ ಹಬ್ಬವು ನಮ್ಮ ಜೀವನಕ್ಕೆ ನೈತಿಕ ಮೌಲ್ಯಗಳನ್ನು ಸಾರುತ್ತದೆ. ಮಹಿಷಾಸುರನ ಸಂಹಾರದ ಕಥೆಯಿಂದ ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಧೈರ್ಯವನ್ನು ಕಲಿಸುತ್ತದೆ. ಶ್ರೀರಾಮ-ರಾವಣರ ಕಥೆಯಿಂದ ಸತ್ಯ ಮತ್ತು ಧರ್ಮದ ಮೇಲೆ ಇರುವ ನಂಬಿಕೆಯನ್ನು ಬಲಪಡಿಸುತ್ತದೆ. ಹೀಗಾಗಿ ದಸರಾ ಹಬ್ಬವು ಕೇವಲ ಆಚರಣೆ ಅಲ್ಲ
, ಅದು ಜೀವನ ಪಾಠ.

ಆಧುನಿಕ ಯುಗದಲ್ಲಿನ ದಸರಾ-
ಇಂದಿನ ಆಧುನಿಕ ಯುಗದಲ್ಲಿಯೂ ದಸರಾ ಹಬ್ಬವು ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ತಂತ್ರಜ್ಞಾನ
, ವಿಜ್ಞಾನ ಎಷ್ಟೇ ಮುಂದುವರೆದರೂ ಸಹ ಜನರು ದಸರಾ ಹಬ್ಬವನ್ನು ಅದೇ ಭಕ್ತಿ-ಭಾವದಿಂದ ಆಚರಿಸುತ್ತಾರೆ. ಪ್ರವಾಸೋದ್ಯಮದ ದೃಷ್ಟಿಯಿಂದ ಮೈಸೂರು ದಸರಾ ಜಗತ್ತಿಗೆ ಕರ್ನಾಟಕದ ಪರಿಚಯವನ್ನು ಮಾಡಿಕೊಡುತ್ತಿದೆ. ಹಬ್ಬವು ಆರ್ಥಿಕ ಚಟುವಟಿಕೆಗಳಿಗೂ ಸಹ ಕಾರಣವಾಗಿದೆ. ಸಣ್ಣ ವ್ಯಾಪಾರಿಗಳು, ಕಲಾವಿದರು, ಹಸ್ತಕಲೆಗಾರರು ದಸರಾ ಹಬ್ಬದಿಂದ ಜೀವನೋಪಾಯ ಪಡೆಯುತ್ತಾರೆ.

ಸಮಾರೋಪ-
ಒಟ್ಟಾರೆ
, ದಸರಾ ಹಬ್ಬವು ಭಕ್ತಿ, ಶಕ್ತಿ, ಏಕತೆ ಮತ್ತು ಸಾಂಸ್ಕೃತಿಕ ವೈಭವದ ಹಬ್ಬ. ಅಸತ್ಯದ ಮೇಲೆ ಸತ್ಯದ ವಿಜಯ, ಅಧರ್ಮದ ಮೇಲೆ ಧರ್ಮದ ವಿಜಯ ಎಂಬ ಸಂದೇಶವನ್ನು ನೀಡುವ ದಸರಾ, ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಹೀಗಾಗಿ ದಸರಾ ಹಬ್ಬವು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ಮಾನವೀಯ ಮೌಲ್ಯಗಳನ್ನು ನೆನಪಿಸುವ ರಾಷ್ಟ್ರೀಯ ಹಬ್ಬವಾಗಿದೆ.
ಲೇಖನ: ಚಂದನ್ ಎಸ್ ಅವಂಟಿ, ಇಡ್ಲೂರ್
, ಯಾದಗಿರಿ ಜಿಲ್ಲೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!