Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Technology News

ಪ್ಲಾಸ್ಟಿಕ್ ತ್ಯಾಜ್ಯದಿಂದ ಆಟಿಕೆಗಳ ತಯಾರಿ;ವಿಜ್ಞಾನ ಕಲಿಕೆಗೆ ಸಹಕಾರಿ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭೂಮಿಯನ್ನು ನಿರಂತರವಾಗಿ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿಜ್ಞಾನದ ಆಟಿಕೆಗಳನ್ನು ತಯಾರಿಸಿ, ವಿಜ್ಞಾನದ ನಿಯಮ, ತತ್ವ ಸಿದ್ಧಾಂತಗಳನ್ನು ತಿಳಿಯುವುದರ ಮೂಲಕ ಕಸವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ. ಆರ್. ದಾಸೇಗೌಡ ಅವರು ಅಭಿಪ್ರಾಯ ಪಟ್ಟರು.

ಹಿರಿಯೂರು ತಾಲೂಕು ಆಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸುಂದರ್ಲಾಲ್ ಬಹುಗುಣ ಹಸಿರುಪಡೆ ಮತ್ತು ವಿಜ್ಞಾನ ಕ್ಲಬ್ ವತಿಯಿಂದ ಸೋಮವಾರ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಜ್ಞಾನ ಆಟಿಕೆಗಳ ತಯಾರಿಕೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳನ್ನು ಕುರಿತು ಮಾತನಾಡಿದರು.

ಪ್ಲಾಸಿಕ್ ಮಾನವನಿಗೆ ವರವೂ ಹೌದು ಶಾಪವು ಹೌದು, ಕೃಷಿ ಕ್ಷೇತ್ರಕ್ಕೆ ಪ್ಲಾಸ್ಟಿಕ್ ಕೊಳವೆಗಳು, ಹನಿನೀರಾವರಿ ವ್ಯವಸ್ಥೆಗೆ ವರವಾಗಿದ್ದರೆ, ಏಕ ಬಳಕೆ ಪ್ಲಾಸ್ಟಿಕ್ ಶಾಪವಾಗಿ ಜೀವ ಸಂಕುಲವನ್ನು ಕಾಡುತ್ತಿದೆ. ತಾಯಿ ಮಗುವಿನ ಸಂಪರ್ಕಕೊಂಡಿ ಹೊಕ್ಕಳು ಬಳ್ಳಿಯಲ್ಲಿ ಪ್ಲಾಸ್ಟಿಕ್ ಅಂಶ ಕಂಡು ಬಂದಿದೆ. ಕುಡಿವ ನೀರಿನ ಒಂದೇ ಬಾಟಲಿಯನ್ನು ಆರು ತಿಂಗಳ ಕಾಲ ಬಳಸಿದ್ದರಿಂದ ನೀರಲ್ಲಿ ಪ್ಲಾಸ್ಟಿಕ್ ಬೆರೆತು ರಕ್ತದ ಕ್ಯಾನ್ಸರ್ ಗೆ ಕಾರಣವಾಗಿ ದುಬೈ ನ ಒಂಭತ್ತನೇ ತರಗತಿ ವಿದ್ಯಾರ್ಥಿಯೊಬ್ಬಳು ಮರಣಹೊಂದಿರುವುದು ಸುದ್ಧಿಯಾಗಿದೆ.

ಬಿಸಿ ಅಥವಾ ತಂಪು ಆಹಾರ ಪದಾರ್ಥ ಗಳನ್ನು ಪ್ಲಾಸ್ಟಿಕ್ ನಲ್ಲಿ ಇಟ್ಟರೆ ಪ್ಲಾಸ್ಟಿಕ್ ಕರಗಿ ಆಹಾರಕ್ಕೆ ಬಿಡುಗಡೆಯಾಗುತ್ತದೆ. ಹಾಗಾಗಿ ಇವತ್ತು ಪ್ಲಾಸ್ಟಿಕ್ ಸರ್ವಂತಯಾಮಿಯಾಗಿ ನೆಲ ಜಲ, ಗಾಳಿ,ಆಹಾರಗಳಿಗೆ ಕೇಡು ಉಂಟು ಮಾಡುತ್ತಿದೆ. ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ತುಂಬಿಟ್ಟು,ಬಟ್ಟೆ ಚೀಲಗಳ ಬಳಕೆಗೂ ಸಹ ಡಿ. ಮಾರ್ಟ್ ಗಳು ಅಡ್ಡಿ ಮಾಡುತ್ತಿವೆ.

ಆಹಾರ ತಯಾರಿಕಾ ಕಂಪನಿಗಳು ತಮ್ಮ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಹಿಂದೆ ಪರಿಸರ ಸ್ನೇಹಿ ಕಾಗದ ಬಳಸುತ್ತಿದ್ದವು ಆದರೆ ಈಗ ತಮ್ಮ ಲಾಭಕ್ಕಾಗಿ ಪ್ಲಾಸ್ಟಿಕ್ ನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ನ್ನು ಸುಟ್ಟರೆ ಪರಿಸರ ಸ್ವಚ್ಛವಾಗುತ್ತದೆ ಎಂಬುದು ತಪ್ಪು ತಿಳುವಳಿಕೆ. ಸುಟ್ಟರೆ ಬಂಧನದಲ್ಲಿರುವ ರಾಕ್ಷಸ ನನ್ನು ಬಯಲಿಗೆ ಬಿಟ್ಟಂಟಾಗಿ ಗಾಳಿಯನ್ನು ಮಲಿನ ಮಾಡುತ್ತದೆ. ಆದ್ದರಿಂದ ಎಲ್ಲರೂ ತುರ್ತಾಗಿ ಎಚ್ಚರ ವಹಿಸಿ ಪ್ಲಾಸ್ಟಿಕ್ ನ ವೈಜ್ಞಾನಿಕ ನಿರ್ವಹಣೆ ಮಾಡಬೇಕು ಎಂದು ಕರೆ ಕೊಟ್ಟರು. 

 ವಿಜ್ಞಾನ ಕೇಂದ್ರದ ಕಾರ್ಯದರ್ಶಿಹಾಗೂ ನಿವೃತ್ತ ಉಪನ್ಯಾಸಕ ಸಂಪನ್ಮೂಲ ವ್ಯಕ್ತಿ ಕೆ.ರಾಜಕುಮಾರ್ ಮಾತನಾಡಿ ನಮ್ಮ ಸುತ್ತಮುತ್ತ ದೊರೆಯುವ ವ್ಯರ್ಥ ಪದಾರ್ಥಗಳನ್ನು ಬಳಸಿಕೊಂಡು ವಿಜ್ಞಾನದ ಆಟಿಕೆಗಳನ್ನು ಹೇಗೆ ತಯಾರಿಸಬಹುದು ಎಂದು ಮತ್ತು ಅದರ ಮಹತ್ವವನ್ನು ತಿಳಿಸಿ ಕೊಡುವುದರ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ತ್ಯಾಜ್ಯ ಪ್ಲಾಸಿಕ್ ನಿಂದ ತಯಾರಿಸಿದ ಆಟಿಕೆಗಳಿಂದ ಶೂನ್ಯ ಗುರುತ್ವದಲ್ಲಿ ತೂಕರಾಹಿತ್ಯ, ಶಬ್ದದಲ್ಲಿ ಡಾಪ್ಲರ್ ಪರಿಣಾಮ, ನ್ಯೂಟಾನ್ನನ  ಚಲನೆಯ ನಿಯಮಗಳು, ಗುರುತ್ವಕೇಂದ್ರ, ಸ್ಟೇಟಸ್ಕೊಪ್ ಸಂಶೋಧನೆ, ಸೌರವ್ಯೂಹದ ಪರಿಕಲ್ಪನೆ, ಭೂಮಿಯ ಜಿಯಾಯಿಡ್ ಅಕಾರದ ಮಾದರಿ, ಇತ್ಯಾದಿ. ಮಾದರಿಗಳನ್ನು  ಪ್ರದರ್ಶಿಸಿ,ವಿದ್ಯಾರ್ಥಿಗಳು ಮಾಡಿ ಕಲಿ ಎಂಬ ಪರಿಕಲ್ಪನೆಯೊಂದಿಗೆ ಬಹಳ ಉತ್ಸಾಹದಿಂದ ಕಲಿಕೆಯಲ್ಲಿ ಭಾಗವಹಿಸುವಂತೆ ಮಾಡಿದರು.

ಶಾಲಾ ಮುಖ್ಯ ಶಿಕ್ಷಕ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಳ್ಳಲು ಚಟುವಟಿಕೆ ಆಧಾರಿತ ಕಲಿಕೆ ತುಂಬಾ ಮಹತ್ವವಾದದ್ದು ಎಂದು ತಿಳಿಸಿದರು. 

ಇಂದುಶ್ರೀ ಮತ್ತು ರಮ್ಯಾ ಕೆ ಟಿ ಪ್ರಾರ್ಥಿಸಿದರು. ಶಿಕ್ಷಕ ಹನುಮಂತಪ್ಪ ಸ್ವಾಗತಿಸಿದರು. ಶಿಕ್ಷಕ ಸನಾವುಲ್ಲಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅನಂತ ಪದ್ಮನಾಭ ವಂದಿಸಿದರು. ವಿಜ್ಞಾನ ಶಿಕ್ಷಕ ಮುತ್ತುರಾಜ್ ನಿರೂಪಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!