ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ಕರಡು ಪ್ರತಿಯನ್ನು ಮತದಾರರ ನೋಂದಣಿ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಟಿ.ಆರ್. ಮಂಜುನಾಥ್ಬಿಡುಗಡೆ ಮಾಡಿದರು.
ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಅವರು ಮಾಹಿತಿ ನೀಡಿ ಮಾತನಾಡಿ ಮತದಾರರ ಕರಡು ಪ್ರತಿಯಲ್ಲಿನ ಅಂಕಿ ಅಂಶಗಳಂತೆ ಪರಿಷ್ಕರಣೆಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಿನದಾಗಿ ಕುಸಿತವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ 7,062 ಇದ್ದ ಯುವ ಮತದಾರರ ಸಂಖ್ಯೆ, ಪರಿಷ್ಕರಣೆ ನಂತರ 4,667ಕ್ಕೆ ಕುಸಿದಿದೆ. ಹಾಗೆಯೇ ಪುರುಷ ಮತದಾರರ ಸಂಖ್ಯೆ ಗಿಂತಲೂ ಮಹಿಳಾ ಮತದಾರರ ಸಂಖ್ಯೆಯೇ ಕಡಿಮೆಯಾಗಿದೆ ಎಂದರು.
ಪರಿಷ್ಕರಣೆಗೂ ಮುನ್ನ 1,13,822 ಇದ್ದ ಮತದಾರರ ಸಂಖ್ಯೆ ಪರಿಷ್ಕರಣೆಯ ನಂತರ 97,661 ಆಗಿದೆ. ಅಂದರೆ 16,161 ಮತದಾರರ ಸಂಖ್ಯೆ ಕಡಿಮೆಯಾಗಿದೆ. 1,09,576 ಪುರುಷ ಮತದಾರರ ಸಂಖ್ಯೆಯಲ್ಲಿ 15,010 ಮತದಾರರು ಮಾತ್ರ ಕಡಿಮೆಯಾಗಿದ್ದಾರೆ. ಶಾಶ್ವತವಾಗಿ 19,298 ಜನ ಮತದಾರರು ಸ್ಥಳಾಂತರ ವಾಗಿದ್ದಾರೆ. 6,497 ಜನ ಮತದಾರರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕರಡು ಪತ್ರಿಗಳನ್ನು ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಿಗೆ ಉಪವಿಭಾಗಾಧಿಕಾರಿ ಟಿ.ಆರ್ಮಂಜುನಾಥ್ ವಿತರಿಸಿದರು. ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ, ಚುನಾವಣ ಶಿರಸ್ತೆದಾರ್ ಡಿ.ಪ್ರಕಾಶ್ಹಾಜರಿದ್ದರು.



