i
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರ ಮಾವನವರಾದ ಕೆ ಹನುಮಯ್ಯ(82 ) ಇವರು ಗುರುವಾರ ಹಿರಿಯೂರು ತಾಲೂಕಿನ ಸ್ವಗ್ರಾಮ ಟಿ.ಬಿ.ಗೊಲ್ಲರಹಟ್ಟಿಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಮೃತ ಕೆ.ಹನುಮಯ್ಯನವರು ನಿವೃತ್ತ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರಿಗೆ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಕ್ಕಳು ಇದ್ದರು.
ಮೃತರ ಅಂತ್ಯ ಕ್ರಿಯೆ ಅಕ್ಟೋಬರ್-28ರಂದು ಶುಕ್ರವಾರ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದ ಟಿ.ಬಿ. ಗೊಲ್ಲರಹಟ್ಟಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.