i
ನೀಲಾಂಬಿಕೆ ಅಲಿಯಾಸ್ ಚಂದು ಮೋಹದ ಬಲೆಯಲ್ಲಿ ಮತ್ತಷ್ಟು ಸ್ವಾಮೀಜಿಗಳು…!!!
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್ ರಾಣಿ ನೀಲಾಂಬಿಕೆ ಅಲಿಯಾಸ್ ಚಂದು ಬಂಡೇಮಠದ ಬಸವಲಿಂಗ ಶ್ರೀಗಳನ್ನು ತನ್ನ ಮೋಹದ ಬೆಲೆಯಲ್ಲಿ ಸಿಲುಕಿಸಿ ಸಾವಿಗೆ ಕಾರಣವಾಗಿದ್ದು ಒಂದು ಕಡೆಯಾದರೆ ರಾಜ್ಯದ ವಿವಿಧ ಮಠಗಳ ಮತ್ತಷ್ಟು ಸ್ವಾಮೀಜಿಗಳು ಚಂದುಳ್ಳಿ ಚಲುವೆ ನೀಲಾಂಬಿಕೆಯ ಮೋಹದ ಬಲೆಯಲ್ಲಿ ಸಿಲುಕಿದ್ದಾರಾ ಎನ್ನುವ ಅನುಮಾನ ಪೊಲೀಸರನ್ನ ಕಾಡತೊಡಗಿದೆ.
ಬಂಡೇಮಠದ ಬಸವಲಿಂಗ ಶ್ರೀಗಳು ತಮ್ಮ ಡೆತ್ ನೋಟ್ ನಲ್ಲಿ ಪ್ರಭಾವಿ ನಾಯಕರೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದ್ದು ಪೊಲೀಸರು ಆ ಪ್ರಭಾವಿ ವ್ಯಕ್ತಿಯನ್ನೂ ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಡೆತ್ ನೋಟ್ ನಲ್ಲಿ ಇಬ್ಬರು ಸ್ವಾಮೀಜಿಗಳು ಎಂದು ಮೃತ ಸ್ವಾಮೀಜಿಗಳು ಬರೆದಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಸ್ವಾಮೀಜಿ ಯಾರು ಎನ್ನುವ ಅನುಮಾನ ದಟ್ಟವಾಗುತ್ತಿದ್ದು ಶೀಘ್ರ ಆ ಸ್ವಾಮೀಜಿಯನ್ನು ಬಯಲಿಗೆ ತರುವ ಸಾಧ್ಯತೆ ಇದೆ. ಕಣ್ಣೂರು ಶ್ರೀ, ಮಹದೇವಯ್ಯ ಇವರನ್ನು ಬಂಧಿಸಿರುವ ಪೊಲೀಸರು ನೀಲಾಂಬಿಕೆ ಮತ್ತು ಮಹಾದೇವಯ್ಯ ಇವರುಗಳ ಮೊಬೈಲ್ ಪೋನ್ ಪಡೆದಿರುವ ಪೊಲೀಸರು ಮೊಬೈಲ್ ನಲ್ಲಿನ ಕೆಲ ವಿಡಿಯೋಗಳು ಪೊಲೀಸರಿಗೆ ಮತ್ತಷ್ಟು ಶಾಕ್ ನೀಡಿದ್ದು ನೀಲಾಂಬಿಕೆ ಮೊಬೈಲ್ನಲ್ಲಿ ಸ್ಫೋಟಕ ರಹಸ್ಯ ವೀಡಿಯೋ ಲಭ್ಯವಾಗಿರುವ ಮಾಹಿತಿ ಲಭಿಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಯಾವ ಯಾವ ಸ್ವಾಮೀಜಿಗಳು ಅಥವಾ ರಾಜಕಾರಣಿಗಳು ಮೋಹಕ ಚಲುವೆಯ ಹನಿಟ್ರ್ಯಾಪ್ ನಲ್ಲಿ ಬಂಧಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹನಿ ಟ್ರ್ಯಾಪ್ ಬಲೆಗೆ ಬಿದ್ದ ಕಂಚುಗಲ್ ಬಂಡೆ ಮಠದ ಬಸವಲಿಂಗ ಶ್ರೀಗಳು ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದಕ್ಕೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮನ್ನು ಇದರಲ್ಲಿ ಸಿಲುಕಿಸಿದ ಎಲ್ಲರ ವಿವರವನ್ನು ತಿಳಿಸಿದ್ದಾರೆ. ಹೀಗಾಗಿ ಅವರ ದಾಯಾದಿ ಮೃತ್ಯುಂಜಯ ಸ್ವಾಮಿ ಜೊತೆಗೆ ತುಮಕೂರಿನ ವಕೀಲ ಮಹಾದೇವಯ್ಯ ಹಾಗೂ ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಲಾಂಬಿಕೆಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಅಲಿಯಾಸ್ ಚಂದು ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ನೀಲಾಂಬಿಕೆ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಆಕೆಯ ಅಜ್ಜಿ ಮನೆ ತುಮಕೂರು ಎನ್ನಲಾಗಿದೆ. ರಜೆ ದಿನಗಳಲ್ಲಿ ತುಮಕೂರಿಗೆ ಬರುತ್ತಿದ್ದ ಆಕೆ, ತನ್ನ ಮಾವ ಮಠದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಲೀಸಾಗಿ ಪ್ರವೇಶ ಪಡೆದುಕೊಂಡಿದ್ದಾಳೆ. ಅಲ್ಲದೆ ಈಕೆಯ ತಂದೆ – ತಾಯಿಯೂ ಸಹ ದೈವ ಭಕ್ತರಾಗಿದ್ದ ಕಾರಣ ಮಗಳೊಂದಿಗೆ ಆಗಾಗ ಭೇಟಿ ನೀಡುತ್ತಿದ್ದರು ಎನ್ನವ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿವೆ.