i
ಅತ್ತ ಶಾಸಕಿ ಪೂರ್ಣಿಮಾ ವಿದೇಶಿ ಪ್ರವಾಸ ಇತ್ತ ಸುಧಾಕರ್ ಬೆಂಬಲಿಸಲು ಗೊಲ್ಲ ಸಮಾಜದ ಯುವ ಮುಖಂಡರ ತೀರ್ಮಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಗೊಲ್ಲ ಸಮಾಜದ ಯುವ ಮುಖಂಡರುಗಳು ಶ್ರೀ ಗಣೇಶ ಮತ್ತು ಆಂಜನೇಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಡಿ ಸುಧಾಕರ್ ಅವರ ಪರವಾಗಿ ಮುಂಬರುವ 2023ರ ವಿಧಾನಸಭಾ ಚುನಾವಣಾ ಪ್ರಚಾರ ಮಾಡಲು ಒಮ್ಮತದ ಅಭಿಪ್ರಾಯವನ್ನು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಯುವ ಮುಖಂಡರುಗಳು ತೀರ್ಮಾನಿಸಿದರು.
ಹಿರಿಯೂರು ತಾಲೂಕಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವರಾದ ಡಿ ಸುಧಾಕರ್ ರವರ ಪರವಾಗಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಬಡವರ ಪರವಾಗಿ ಬಡವರ ಏಳಿಗೆಗಾಗಿ ಶ್ರಮಿಸಿದ ಹಾಗೂ ಅವರು ಮಾಡಿರುವ ದಾನ, ಧರ್ಮ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಲ್ಲಾ ಹಳ್ಳಿಗಳಲ್ಲಿ ನಮ್ಮ ಸಮಾಜದ ಕಾಂಗ್ರೆಸ್ ಯುವ ಮುಖಂಡರುಗಳು ಭೇಟಿ ನೀಡಿ ಮನವಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತದಾನ ಮಾಡಿ ಅವರ ಗೆಲುವಿಗೆ ಶ್ರಮಿಸಬೇಕೆಂದು ಪ್ರಚಾರ ಮಾಡಲು ತೀರ್ಮಾನಿಸಲಾಯಿತು.
ಡಿ ಸುಧಾಕರ್ ರವರು ಗೊಲ್ಲ ಸಮಾಜಕ್ಕೆ ಜಿಲ್ಲಾ ಪಂಚಾಯತಿ ಸದಸ್ಯರಾಗಲು, ನಗರಸಭೆ ಅಧ್ಯಕ್ಷರಾಗಲು, ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರಾಗಲು, ಎಪಿಎಂಸಿ ಅಧ್ಯಕ್ಷರಾಗಲು ಸಹಾಯ ಮಾಡಿ ನಮ್ಮ ಸಮಾಜವನ್ನು ರಾಜಕೀಯ, ಶೈಕ್ಷಣಿಕವಾಗಿ ಬೆಳವಣಿಗೆಗೆ ಸಹಕಾರ ನೀಡಿದ್ದು ಹಾಗೂ ನಮ್ಮ ಸಮಾಜವು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡುತ್ತಾ ಬಂದಿದೆ. ಹಾಗೂ ನಮ್ಮ ಸಮಾಜದ ಜಯಮ್ಮ ಬಾಲರಾಜ್ ಮತ್ತು ನಾಗರಾಜ್ ಯಾದವ್ ಅವರನ್ನು ಎಂಎಲ್ಸಿ ಮಾಡುವುದರ ಮುಖಾಂತರ ನಮ್ಮ ಸಮಾಜವನ್ನು ಗುರುತಿಸಿ ಅಧಿಕಾರವನ್ನು ನೀಡಿರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ ಎಂದು ತಿಳಿಸಲಾಯಿತು.
ಸಭೆಯಲ್ಲಿ ಬಬ್ಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೇಮಂತ್ ಎಸ್ ಯಾದವ್, ಪಿಡಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ಗೌಡ್ರು, ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಿತ್ರಜಿತ್ ಯಾದವ್, ಮ್ಯಾಕ್ಲೂರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಸ್ ಕೆ ಟಿ ಚಿತ್ತಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಯಾನಂದ್, ಯಲ್ಲದಕೆರೆ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್, ಬಾಲೆನಹಳ್ಳಿ ನಾಗರಾಜ್, ಜವನಗೊಂಡನಹಳ್ಳಿ ಕೇಶವ್, ಕಾತ್ರಿಕೇನಹಳಳ್ಳಿ ಪಾಲಾಕ್ಷ, ಬಾಲನಹಳ್ಳಿ ಪ್ರಭು ಯಾದವ್, ಕೂಡ್ಲಳ್ಳಿ ಪಾದ್ಲಿಂಗಪ್ಪ, ಮಂಜುನಾಥ್ ಮತ್ತು ನವೀನ್ ಡಾಬಾ, ವಕೀಲ ಮೋಹನ್, ಕೃಷ್ಣ, ಗೋಪಿಯಾದವ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಕಾಂತರಾಜ್ ನಂದಿಹಳ್ಳಿ, ನಾರಾಯಣಗೌಡ, ಮುರುಳಿ, ವದ್ದಿಕೆರೆ ಸಿದ್ದೇಗೌಡ, ಸಿದ್ದವೀರ, ಸಿದ್ದಲಿಂಗಪ್ಪ, ಶ್ರಾವಣಗೆರೆ ಯೋಗರಾಜ್, ವಸಂತ ಮಂಜುನಾಥ್ ಪುನೀತ್ ಬಬ್ಬೂರು ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು