i
ಪೊಲೀಸರ ಅತಿಥಿಯಾಗಿರುವ ಬಸವ ರಾಜೇಂದ್ರ ಎಂಬಾತ ಯಾರು?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2ನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಬಾಲಕಿಯೊಬ್ಬಳ ಮೇಲೆ ಒತ್ತಡ ಹೇರಿದ್ದ ಬಸವರಾಜೇಂದ್ರ ಎಂಬಾತ ಯಾರು ಎನ್ನುವ ಪ್ರಶ್ನೆ ಎದ್ದಿದೆ.
ಬಸವರಾಜೇಂದ್ರ ಎನ್ನುವ ವ್ಯಕ್ತಿ ಮುರುಘಾ ಮಠದ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಮಠದ ಹಾಸ್ಟೆಲ್ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಶ್ರೀಗಳ ವಿರುದ್ಧ ಸುಳ್ಳು ದೂರು ನೀಡುವಂತೆ ಬಗೆ ಬಗೆಯಲ್ಲಿ ಪ್ರಚೋದನೆ ನೀಡಿರುವ ಆಡಿಯೊವೊಂದು ಈಗ ವೈರಲ್ ಆಗಿದೆ. ಬಾಲಕಿಯೊಬ್ಬಳನ್ನು ಆಕೆಯ ಬಡತನ, ತಾಯಿ ಅನಾರೋಗ್ಯ, ಮನೆಯ ಆರ್ಥಿಕ ಸ್ಥಿತಿಗತಿಗಳನ್ನು ಬಂಡವಾಳ ಮಾಡಿಕೊಂಡು ಸುಳ್ಳು ಹೇಳಿಕೆ ನೀಡಲು ವ್ಯಕ್ತಿಯೊಬ್ಬ ಪ್ರಚೋದನೆ ಮಾಡಿದ್ದಾನೆ. ಮುರುಘಾಮಠದ ಪ್ರಭಾರ ವಹಿಸಿಕೊಂಡಿರುವ ಬಸವಪ್ರಭು ಸ್ವಾಮೀಜಿಗಳು ಪೊಲೀಸರಿಗೆ ದೂರು ನೀಡಿದ್ದರಿಂದಾಗಿ ಬಸವಪ್ರಭು ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮುರುಘಾಶ್ರೀಗಳ ವಿರುದ್ಧ ಸುಳ್ಳು ಹೇಳಿಕೆ ನೀಡುವುದರಿಂದ ಸಿಗುವ ಹಣ, ಆಸ್ತಿ ನನಗೆ ಬೇಡ ಎನ್ನುತ್ತಾಳೆ. ನಾನು ದುಡಿದು ಸಾಕ್ತೀನಿ ಎಂದು ಆತ್ಮಾಭಿಮಾನ ಮೆರೆಯುವುದು ಈ ಆಡಿಯೋದಲ್ಲಿದೆ. ಒಂದು ಹಂತದಲ್ಲಿ ಬಸವಪ್ರಭು ನಿನ್ನನ್ನು ನಾನು ಮದುವೆಯಾಗುತ್ತೇನೆ ಎಂದೆಲ್ಲ ಆಮಿಷ ಒಡ್ಡಿದರೂ ಆ ಬಾಲಕಿ ಮಾತ್ರ, ನಿಮ್ಮ ಬಗ್ಗೆ ನನಗೆ ಅಂಥ ಭಾವನೆಗಳೇ ಇಲ್ಲ. ಏನಿದ್ದರೂ ನೀವು ನನ್ನ ಗುರುಗಳು ಎಂದು ಹೇಳುವ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ.